Advertisement

Vijayapura; ಮೂರು ಫೈನಾನ್ಸ್ ಕಳ್ಳತನದಲ್ಲಿ ಮೂವರ ಬಂಧನ

12:58 PM Feb 11, 2024 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ನಡೆದಿದ್ದ ಫೈನಾನ್ಸ್ ಕಳ್ಳತನ, ಕಳ್ಳತನ ಯತ್ನ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Advertisement

ಸಿಂದಗಿ ಪಟ್ಟಣದಲ್ಲಿರುವ ಅನ್ನಪೂರ್ಣ ಫೈನಾನ್ಸ್, ಇಂಡಿ ಪಟ್ಟಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಳ್ಳತನ ಹಾಗೂ ಸಿಂದಗಿ ಪಟ್ಟಣದಲ್ಲಿರುವ ಎಲ್‌&ಟಿ ಕಂಪನಿಯ ಕಳ್ಳತನ ಯತ್ನ ಪ್ರಕರಣದಲ್ಲಿ ಸಿಂದಗಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸಿಂದಗಿ ಪಟ್ಟಣದ ಗೋಲಿಬಾರ ಮಡ್ಡಿಓಣಿ ನಿವಾಸಿಗಳಾದ ಪ್ರಭು ಹಲಗಿ (32), ಅನಿಲ ನಾಯ್ಕೋಡಿ (32), ಬಸವರಾಜ ಮಾದರ (28) ಎಂದು ಗುರುತಿಸಲಾಗಿದೆ. ಬಂಧಿತರಿಂದ 2.20 ಲಕ್ಷ ರೂ. ವಶಕ್ಕೆ ಪಡೆದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಫೈನಾನ್ಸ್ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಸಿಂದಗಿ ಸಿಪಿಐ ಆರ್.ನಾನಾಗೌಡ ಪೊಲೀಸಪಾಟೀಲ, ಪಿಎಸ್ಐ ಭೀಮಣ್ಣ ರಬಕವಿ ನೇತೃತ್ವದ ಪೊಲೀಸ್ ತನಿಖಾ ತಂಡವನ್ನು ಎಸ್ಪಿ ಋಷಿಕೇಶ ಭಗವಾನ್ ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next