Advertisement

ದಾಖಲೆ ಇಲ್ಲದ ನಗ, ನಾಣ್ಯಸಾಗಿಸುತ್ತಿದ್ದ ಮೂವರ ಬಂಧನ

05:22 PM Feb 05, 2018 | Team Udayavani |

ವಿಜಯಪುರ: ದಾಖಲೆ ಇಲ್ಲದೇ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣ ಸಾಗಿಸುತ್ತಿದ್ದ ಮೂವರನ್ನು ಬಂಧಿ ಸಿ 17 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಜಿಲ್ಲೆಯ ನಿಡಗುಂದಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ನಿಡಗುಂದಿ ತಾಲೂಕಿನ ಆಲಮಟ್ಟಿ ಕಡೆಯಿಂದ ಬರುತ್ತಿರುವ ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ದಾಖಲೆ ಇಲ್ಲದೇ ಹಣ ಹಾಗೂ ನಗದು ಸಾಗಿಸುವ ಖಚಿತ ಮಾಹಿತಿ ಆಧರಿಸಿ ನಿಡಗುಂದಿ ಪೊಲೀಸರು ದಾಳಿ ನಡೆಸಿ, ನಗ-ನಾಣ್ಯವನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ ಸುರೇಶ ಕಾಶೀನಾಥ ಕುಂಬಾರ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದ ಕಾಶೀನಾಥ ಬನಗೋಳ ಹಾಗೂ ಹೈದ್ರಾಬಾದ್‌ ಮೂಲದ ತುಕಾರಾಂ ಬಂಧಿತ ಆರೋಪಿಗಳು.

ಬಂಧಿತರಿಂದ 1.86 ಲಕ್ಷ ರೂ. ನಗದು ಹಾಗೂ 12 ಲಕ್ಷ ರೂ. ಮೌಲ್ಯದ 604.90 ಗ್ರಾಂ ಚಿನ್ನಾಭರಣ, ಬಂದೂಕು ಹೋಲುವ ಪ್ಲಾಸ್ಟಿಕ್‌ ಲೈಟರ್‌, ವಾಹನ ಸೇರಿದಂತೆ ಸುಮಾರು 17 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ. ಈ ಕುರಿತು ನಿಡಗುಂದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ತನಿಖೆ ನಡೆಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next