Advertisement

Kundapura ಉದ್ಯಮಿ ಸುರೇಂದ್ರ ಶೆಟ್ಟಿಗೆ ಬೆದರಿಕೆ

11:12 PM Jul 08, 2024 | Team Udayavani |

ಕುಂದಾಪುರ: ಉದ್ಯಮಿ ಸುರೇಂದ್ರ ಶೆಟ್ಟಿ ಅವರಿಗೆ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿ, ಕಾರಿನ ಬಾಗಿಲು ಜಖಂಗೊಳಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

Advertisement

ಈ ಬಗ್ಗೆ ಪ್ರಕರಣ ದಾಖ ಲಾಗಿದ್ದು, ಸುರೇಂದ್ರ ಶೆಟ್ಟಿ ಅವರ ಪತ್ನಿಯ ಹೆಸರಿ ನಲ್ಲಿದ್ದ ಕಟ್ಟಡವೊಂದರ ಕಾಮಗಾರಿ ಯನ್ನು ವ್ಯಕ್ತಿಯೊಬ್ಬರಿಗೆ ವಹಿಸಿದ್ದು ಈ ವಿಷಯದಲ್ಲಿ ಮತ್ತೂಬ್ಬ ಉದ್ಯಮಿ ಸತೀಶ್‌ ಶೆಟ್ಟಿ ಅಸಮಾಧಾನ ಹೊಂದಿದ್ದರು.

ಈ ವಿಚಾರದಲ್ಲಿ ಸತೀಶ್‌ ಶೆಟ್ಟಿ, ಸನ್ನಿಧಿ ಶೆಟ್ಟಿ ಅವರು ಸುರೇಂದ್ರ ಶೆಟ್ಟಿ ಅವರ ಕಾರನ್ನು ಕೆಎಸ್ಸಾರ್ಟಿಸಿ ಡಿಪೊ ಬಳಿ ಅಡ್ಡಗಟ್ಟಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲು ಪ್ರಯತ್ನಪಟ್ಟಿದ್ದು ಕಿಟಕಿ ತೆರೆಯದಿದ್ದಾಗ ಬಾಗಿಲು ಜಖಂ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next