Advertisement

Datta Jayanti; ದತ್ತಪಾದುಕೆ ದರ್ಶನ ಪಡೆದ ಸಾವಿರಾರು ಭಕ್ತರು

11:06 AM Dec 26, 2023 | Team Udayavani |

ಚಿಕ್ಕಮಗಳೂರು: ಜಿಲ್ಲಾಡಳಿತ, ವಿಶ್ವ ಹಿಂದೂ ಪರಿಷತ್, ಭಜ ರಂಗದಳ ಸಂಘಟನೆಯಿಂದ ಆಯೋಜಿಸಿರುವ ದತ್ತಜಯಂತಿ ಹಿನ್ನೆಲೆ ದತ್ತ ಭಕ್ತರು ದತ್ತಪಾದುಕೆ ದರ್ಶನ ಪಡೆದರು.

Advertisement

ಮಂಗಳವಾರ ಬೆಳಿಗ್ಗೆಯಿಂದಲೇ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಕಬ್ಬಿಣದ ಗ್ಯಾಲರಿಯಲ್ಲಿ ಸರತಿಯಲ್ಲಿ ಸಾಗಿ ದತ್ತ ಪಾದುಕೆ ದರ್ಶನ ಪಡೆದು, ಹೋಮ ಹವನಗಳಲ್ಲಿ ಪಾಲ್ಗೊಂಡರು.

ನೂರಾರು ವಾಹನಗಳಲ್ಲಿ ಆಗಮಿಸಿದ ದತ್ತಭಕ್ತರು ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ಸಿಗುವ ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿದ ಭಕ್ತರು, ಕೆಲವರು ಕಾಲ್ನಡಿಗೆಯಲ್ಲಿ ಮತ್ತೆ ಕೆಲವರು ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದರು.

ಇದೇ ವೇಳೆ ಜೈಶ್ರೀರಾಮ್, ದತ್ತಪರ ಘೋಷಣೆ, ಕೀರ್ತನೆ, ಭಜನೆ ಹೇಳುತ್ತ ದತ್ತಪಾದುಕೆ ದರ್ಶನ ಪಡೆದರು. ಮಾಜಿ ಶಾಸಕ ಸಿ.ಟಿ.ರವಿ ದತ್ತಪಾದುಕೆ ದರ್ಶನ ಪಡೆದರು.

Advertisement

ದತ್ತಜಯಂತಿ ಹಿನ್ನಲೆ ಬೀಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ದತ್ತಪೀಠಕ್ಕೆ ತೆರಳುವ ಪ್ರತಿಯೊಂದು ವಾಹನವನ್ನು ತಪಾಸಣೆಗೆ ಒಳಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next