Advertisement

“ಅಂದು ಬೈಯ್ದಿದ್ದವರು ಇಂದು ದೈನೇಸಿಯಂತೆ ಬೇಡುತ್ತಿದ್ದಾರೆ’

06:00 AM Oct 30, 2018 | Team Udayavani |

ನಾಗಮಂಗಲ: “ಕೆಲವೇ ದಿನಗಳ ಹಿಂದೆ ಮಾಜಿ ಸಚಿವ ಚೆಲುವರಾಯಸ್ವಾಮಿಯನ್ನು ಡೆಡ್‌ ಹಾರ್ಸ್‌, ಕ್ಲೋಸ್ಡ್ ಹಾರ್ಸ್‌ ಎಂದ ನಾಯಕರೆಲ್ಲ ಇಂದು ಓಟಿಗಾಗಿ ಅವರ ಮನೆ ಬಳಿ ಹೋಗುತ್ತಿದ್ದಾರೆ, ಇದು ಅವರ ಗೋಸುಂಬೆತನವನ್ನು ತೋರಿಸುತ್ತದೆ’ ಎಂದು
ಮಾಜಿ ಉಪ ಮುಖ್ಯ ಮಂತ್ರಿ ಆರ್‌. ಅಶೋಕ್‌ ಲೇವಡಿ ಮಾಡಿದ್ದಾರೆ. ಪಟ್ಟಣದಲ್ಲಿ ಬಿಜೆಪಿ ಪರ ರೋಡ್‌ ಶೋ ನಡೆಸಿ
ಮತಯಾಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳ ಹಿಂದೆ ಇದೇ 
ಚೆಲುವರಾಯಸ್ವಾಮಿಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಪುಟ್ಟರಾಜು, ಕ್ಷೇತ್ರದ ಶಾಸಕ ಸುರೇಶ್‌ಗೌಡ ಬಾಯಿಗೆ ಬಂದಂತೆ ಬೈಯ್ದಿದ್ದರು. ಆದರೆ, ಇಂದು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಸಿಆರ್‌ಎಸ್‌ ಮನೆಯ ಬಾಗಿಲನ್ನು ದೈನೇಸಿಯಂತೆ ತಟ್ಟುತ್ತಿದ್ದಾರೆ.
ಅದು ಅವರಿಗೆ ಬೇಕಾಗಿತ್ತಾ ಎಂದು ಪ್ರಶ್ನಿಸಿದರು.

Advertisement

ಕಾಂಗ್ರೆಸ್‌ನವರು ಯಾವ ಮುಖ ಹೊತ್ತುಕೊಂಡು ಜೆಡಿಎಸ್‌ಗೆ ಮತ ಕೇಳುತ್ತಾರೋ ಗೊತ್ತಿಲ್ಲ. ಏಕೆಂದರೆ, ಮಾಜಿ ಸಿಎಂ ಸಿದ್ದರಾಮಯ್ಯನವರು ಜೆಡಿಎಸ್‌ನ ರಾಹು, ಕೇತು, ಶನಿಗಳು ಸೇರಿ ನನ್ನನ್ನು ಸೋಲಿಸಿದ್ದಾರೆಂದು ಹೇಳಿದ್ದಾರೆ. ದಿನ ಬೆಳಗಾದರೆ
ಎರಡೂ ಪಕ್ಷಗಳು ಜಗಳವಾಡುತ್ತಿದ್ದು, ಸರ್ಕಾರ ಸಂಪೂರ್ಣ ಸ್ತಬಟಛಿವಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಭಲ ವಿರೋಧ ಪಕ್ಷವಾಗಿರುವ ಜೆಡಿಎಸ್‌ ಪಕ್ಷದ ಅಭ್ಯರ್ಥಿಗೆ ಮತ ಕೊಡಿಸಲು ನಮಗೆ ಮುಜುಗರ ಆಗುವುದು ಸಹಜ. ಆದರೆ ಅದನ್ನೆಲ್ಲ ಬದಿಗೊತ್ತಿ ಮೈತ್ರಿಧರ್ಮವನ್ನು ಕಾಪಾಡಲು ನಾವು ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕಿಸಬೇಕು.
● ಚೆಲುವರಾಯಸ್ವಾಮಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next