Advertisement

ಅಪ್ಪ-ಮಗನಿಗೆ 7 ಗಂಟೆ ಪೊಲೀಸರಿಂದ ಚಿತ್ರಹಿಂಸೆ!

12:04 AM Oct 28, 2020 | mahesh |

ಚೆನ್ನೈ: ತಮಿಳುನಾಡಿನ ತೂತುಕುಡಿಯಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿ ಅಪ್ಪ-ಮಗ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಜಯರಾಜ್‌ ಹಾಗೂ ಬೆನ್ನಿಕ್ಸ್‌ಗೆ ಸುಮಾರು 7 ಗಂಟೆಗಳ ಕಾಲ ಪೊಲೀಸರು ಚಿತ್ರಹಿಂಸೆ ನೀಡಿದ್ದರು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಸಾತಂಕುಲಂ ಪೊಲೀಸ್‌ ಠಾಣೆಯಲ್ಲಿ ಅಪ್ಪ-ಮಗನ ಮೇಲೆ ಜೂ.9ರ ರಾತ್ರಿ 7.45ರಿಂದ ಮಾರನೇ ದಿನ ಬೆಳಗಿನ ಜಾವ 3 ಗಂಟೆಯವರೆಗೂ ಪೊಲೀಸರು ಹಲ್ಲೆ ನಡೆಸಿದ್ದರು. ಅವರ ಬಟ್ಟೆಗಳನ್ನು ಬಿಚ್ಚಿ ಇನ್ನಷ್ಟು ಥಳಿಸುವಂತೆ ಇತರೆ ಪೊಲೀಸರಿಗೆ ಇನ್‌ಸ್ಪೆಕ್ಟರ್‌ ಎಸ್‌. ಶ್ರೀಧರ್‌ ಸೂಚಿಸುತ್ತಿದ್ದರು. ಅವರ ರಕ್ತದ ಕಲೆಗಳು ಪೊಲೀಸರ ಲಾಠಿ ಹಾಗೂ ಠಾಣೆಯ ಗೋಡೆಗಳಲ್ಲೂ ಅಂಟಿಕೊಂಡಿದ್ದವು ಎಂದೂ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಕತ್ತಲಾದ ಬಳಿಕವೂ ತಮ್ಮ ಮೊಬೈಲ್‌ ರೀಚಾರ್ಜ್‌ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಜೂ.9ರಂದು ಅಪ್ಪ- ಮಗನನ್ನು ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸರು ನೀಡಿದ ಚಿತ್ರಹಿಂಸೆಯಿಂದಾಗಿ ಇಬ್ಬರೂ ಸಾವಿಗೀಡಾ ಗಿದ್ದರು. ಈ ಘಟನೆ ತಮಿಳುನಾಡಿನಾ ದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next