Advertisement

ಅಮೂಲ್ಯ ನಿಧಿಯಾಗಿ ಇಡುತ್ತೇನೆ: ರಜನಿ ಆಶೀರ್ವಾದಕ್ಕೆ ಕಿರಗಂದೂರು ಪ್ರತಿಕ್ರಿಯೆ

10:32 AM Oct 27, 2022 | Team Udayavani |

ಬೆಂಗಳೂರು : ದಿನದಿಂದ ದಿನಕ್ಕೆ ಕಾಡ್ಗಿಚ್ಚಿನಂತೆ ಪ್ರೇಕ್ಷಕರ ಮನ ಗೆಲ್ಲುತ್ತಿರುವ ‘ಕಾಂತಾರ’ ಚಿತ್ರದ ಕುರಿತು ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೆಚ್ಚುಗೆಯ ಮಾತುಗಳಿಗೆ ಹೊಂಬಾಳೆ ಫೀಲ್ಮ್ಸ್ ನ ವಿಜಯ್ ಕಿರಗಂದೂರು ಅವರು ‘ಇದು ಅತ್ಯಮೂಲ್ಯವಾದ ನಿಧಿಯಾಗಿ ಕಾಪಿಡುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

”ಇದು ಅಮೂಲ್ಯವಾದುದು. ನಾವು ಆಶೀರ್ವಾದ ಪಡೆದಿದ್ದೇವೆ. ರಜಿನಿಕಾಂತ್ ಸರ್, ದೇವರು ದಯೆ ತೋರಿದ್ದಾನೆ. ನಾವು ಕಾಂತಾರವನ್ನು ಬೆಳಕಿಗೆ ತರಲು ನಾವು ಬೆಳಕಿಗೆ ತರಲು ಸಾಧ್ಯವಾಯಿತು. ಇದು ಅಳಿಸಲಾಗದ ಗುರುತಾಗಿದೆ ಮತ್ತು ನಾನು ಈ ಕ್ಷಣವನ್ನು ಅಮೂಲ್ಯ ನಿಧಿ ಯಾಗಿ ಕಾಪಿಡುತ್ತೇನೆ.”ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ :ನಿಮಗೆ ಹ್ಯಾಟ್ಸ್ ಆಫ್..; ಕಾಂತಾರ ಚಿತ್ರಕ್ಕೆ ರಜನಿ ಕಾಂತ್ ಮೆಚ್ಚುಗೆ 

ಕಾಂತಾರ ತಮಿಳು ಡಬ್ ಗೆ ತಮಿಳುನಾಡಿನಲ್ಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸದ್ಯ ನೂರಕ್ಕೂ ಹೆಚ್ಚು ಚಿತ್ರ ಮಂದಿರಗಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಗಲ್ಲಾ ಪೆಟ್ಟಿಗೆ ಸೂರೆ ಗೈಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next