Advertisement

ಇದು ವಿಫ‌ಲ ಸರಕಾರ ಲೋಕಸಭೆಯಲ್ಲಿ ಕಾಂಗ್ರೆಸ್‌ ಆರೋಪ

10:55 AM Feb 07, 2018 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಭರವಸೆಗಳನ್ನು ಈಡೇರಿಸುವಲ್ಲಿ ವಿಫ‌ಲವಾಗಿದೆ ಎಂದು ವಿಪಕ್ಷಗಳು ಲೋಕಸಭೆಯಲ್ಲಿ ಆರೋಪಿಸಿವೆ. ರಾಷ್ಟ್ರಪತಿಗಳ ಭಾಷಣದ ಮೇಲೆ ಧನ್ಯವಾದ ಸಮರ್ಪಿಸುವ ಗೊತ್ತುವಳಿ ಮೇಲೆ ಮಾತ ನಾಡಿದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸರಕಾರದ ನೀತಿ ಗಳಿಂದ ಜನರಿಗೆ ತೊಂದರೆಯಾಗುತ್ತಿವೆ ಎಂದರು.  ಕಾಂಗ್ರೆಸ್‌ ನೇತೃತ್ವದ ಹಿಂದಿನ ಸರಕಾರಗಳು 70 ವರ್ಷಗಳಲ್ಲಿ ಜಾರಿಗೆ ತಂದಿರುವ ಉತ್ತಮ ಕೆಲಸಗಳನ್ನು ಕಡೆಗಣಿಸುವ ಕೆಲಸವನ್ನು ಹಾಲಿ ಸರಕಾರ ಮಾಡುತ್ತಿದೆ. ಕಾಂಗ್ರೆಸ್‌ ದೇಶಕ್ಕೇನು ಮಾಡಿದೆ ಎಂಬುದನ್ನು ಹಿಂದಿನ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರಕಾರ ತಿಳಿದುಕೊಳ್ಳಲೇ ಇಲ್ಲ ಎಂದು ಅವರು ಹೇಳಿದ್ದಾರೆ. 

Advertisement

ಪಾಕ್‌ ಕುರಿತ ಸರಕಾರದ ನೀತಿ ವಿಫ‌ಲವಾ ಗಿದೆ. ಇದರಿಂದಾಗಿ ಆ ದೇಶ ನಮ್ಮವರನ್ನು ಕೊಲ್ಲುತ್ತಿದೆ ಎಂದು ಟೀಕಿಸಿದರು. ಹೀಗಾಗಿ 56 ಇಂಚಿನ ಎದೆ ಎಲ್ಲಿದೆ ಎಂದು ಮೋದಿಯ ವರನ್ನು ಉದ್ದೇಶಿಸಿ ಪ್ರಶ್ನಿಸಿದರು ಖರ್ಗೆ.

ರಫೇಲ್‌ ಅವ್ಯವಹಾರ: ರಫೇಲ್‌ ಯುದ್ಧ ವಿಮಾನಗಳ ಖರೀದಿ ಬಗ್ಗೆ ಮಾಹಿತಿ ಬಹಿರಂಗ ಗೊಳಿಸುವುದಿಲ್ಲ ಎಂದು ಸರಕಾರ ಹೇಳು ತ್ತಿದ್ದು, ಅದರಲ್ಲಿ ಅವ್ಯವಹಾರ ಉಂಟಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಪ್ರಧಾನಿ ಮೋದಿಯವರೇ ಖುದ್ದಾಗಿ ಪ್ಯಾರಿಸ್‌ಗೆ ತೆರಳಿ, ಡೀಲ್‌ನಲ್ಲಿ ಬದಲು ಮಾಡಿದ್ದಾರೆ. ಭಾರತಕ್ಕೆ ಈ ಮಾಹಿತಿ ಗೊತ್ತಿದೆ ಎಂದಿದ್ದಾರೆ. 

21.54 ಕೋಟಿ ನಕಲಿ ನೋಟು:  ಈವರೆಗೆ 21.54 ಕೋಟಿ ನಕಲಿ ನೋಟುಗಳನ್ನು ವಶಪ ಡಿಸಿಕೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ. 

ಇಂದು ಪ್ರಧಾನಿ ಉತ್ತರ: ಪ್ರಧಾನಿ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ನೀಡುವ ಗೊತ್ತುವಳಿಗೆ ಬುಧವಾರ ಉತ್ತರ ನೀಡಲಿದ್ದು, ಎಲ್ಲ ಸಂಸದರು ಹಾಜರಿ ರಬೇಕು ಎಂದು ಬಿಜೆಪಿ ವಿಪ್‌ ನೀಡಿದೆ.

Advertisement

ವಿಪಕ್ಷಗಳ ಆಕ್ರೋಶ: ರಾಜ್ಯಸಭೆ ಕಲಾಪ ಮುಂದೂಡುವುದಕ್ಕೆ ವಿಪಕ್ಷಗಳು ಆಕ್ಷೇಪಿ ಸಿವೆ. ಬೆಳಗ್ಗೆ 11 ಗಂಟೆಗೆ ಸಮಾವೇಶಗೊಂಡಿದ್ದ ಸದನವನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದೂ ಡಲಾಗಿತ್ತು. ಸಭಾಪತಿ ವೆಂಕಯ್ಯ ನಾಯ್ಡು ಕ್ರಮದಿಂದ ವಿಚಲಿತರಾದ ಪ್ರತಿಪಕ್ಷ ನಾಯಕ ಗುಲಾಂ ನಬಿ, ಸರ್ಕಾರ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದೆ. ಪ್ರತಿಪಕ್ಷಗಳ ಧ್ವನಿ ಅಡಗಿಸಲು ಮುಂದಾಗುತ್ತಿದೆ. 1950ರ ಬಳಿಕ ಈ ರೀತಿಯಾಗಿಲ್ಲ ಎಂದರು.

ಅವಕ್ಕಾದ ಖರ್ಗೆ
ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವಕ್ಕಾದ ಘಟನೆ ನಡೆದಿದೆ. ಬಜೆಟ್‌ನಲ್ಲಿ ಆಂಧ್ರಕ್ಕೆ ನೆೆರವು ಪ್ರಕಟಿಸಿಲ್ಲ ವೆಂದು ಟಿಡಿಪಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಖರ್ಗೆ ಮಾತನಾಡುತ್ತಿದ್ದರು. ಟಿಡಿಪಿ ಸಂಸದರೊಬ್ಬರು ಅವರ ಮುಂದೆಯೇ ನಿಂತು ಘೋಷಣೆ ಕೂಗಲಾರಂಭಿಸಿ ದರು. ಸ್ಪೀಕರ್‌ ಅವರನ್ನು ನೋಡಲು ಅಸಾಧ್ಯವಾದ್ದರಿಂದ ಸಂಸದರ ಹೆಗಲು ತಟ್ಟಿ ಕೊಂಚ ಸರಿದು ನಿಲ್ಲುವಂತೆ ಸೂಚಿಸಿ ದರು. ಇದರಿಂದ ಸಿಟ್ಟಿಗೆದ್ದ ಆ ಸಂಸದ “ನೀವೇಕೆ ನನಗೆ ಹೊಡೆಯುತ್ತೀರಿ? ಇದು ಒಳ್ಳೆಯದಲ್ಲ’ ಎನ್ನತೊಡಗಿದರು. ಇದರಿಂದ ಅವಕ್ಕಾದ ಖರ್ಗೆಯವರಿಗೆ ಕೆಲ ಕಾಲ ಮಾತುಗಳೇ ಹೊರಡಲಿಲ್ಲ. ಅನಂತರ ಮತ್ತೂಬ್ಬ ಟಿಡಿಪಿ ಸಂಸದ ಬಂದು ಸಮಾಧಾನಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next