Advertisement

Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

11:52 AM Sep 20, 2024 | sudhir |

ತೀರ್ಥಹಳ್ಳಿ : ಮರವೊಂದನ್ನು ಹತ್ತಿ ಕುಳಿತುಕೊಂಡಿದ್ದ ಹೆಬ್ಬಾವೊಂದನ್ನು ಸ್ಥಳೀಯರೇ ಹಿಡಿದು ಅರಣ್ಯಕ್ಕೆ ಬಿಟ್ಟ ಘಟನೆ ಗುರುವಾರ ಸಂಜೆ ಮೇಳಿಗೆಯಲ್ಲಿ ನಡೆದಿದೆ.

Advertisement

ತಾಲೂಕಿನ ಮೇಳಿಗೆಯ ಕೆರೆದಂಡೆ ಬಳಿ ಇರುವ ಅಡಿಗೆ ಕಂಟ್ರಾಕ್ಟರ್ ಮಹೇಶ್ ಎಂಬುವರ ಮನೆ ಪಕ್ಕದ ಮರದಲ್ಲಿ 12 ರಿಂದ 13 ಅಡಿ ಉದ್ದದ ಅಂದಾಜು 30 ಕೆಜಿ ತೂಕದ ಹೆಬ್ಬಾವೊಂದು ಮರವನ್ನು ಏರಿ ಕುಳಿತಿತ್ತು. ಅದನ್ನು ನೋಡಿ ವಿಷಯ ತಿಳಿದು ಕಂತುಗದ್ದೆ ಪ್ರವೀಣ್ ಎಂಬುವರು ಅದನ್ನು ಹಿಡಿದು ಹತ್ತಿರದ ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.

ಹೆಬ್ಬಾವು ಎಲ್ಲಿಂದ ಬಂತು ಹೇಗೆ ಬಂತು ಎಂಬುದು ತಿಳಿದಿಲ್ಲ. ವಿಷಯ ತಿಳಿದು ಊರಿನ ಗ್ರಾಮಸ್ಥರು ಕೆಲ ಕಾಲ ಗಾಬರಿಗೊಂಡಿದ್ದರು.

ಇದನ್ನೂ ಓದಿ: Anandpura: ಗಾಂಜಾ ಸೇವನೆ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next