Advertisement

ತಾಲೂಕಾದ್ಯಂತ ಡೆಂಘೀ, ಚಿಕೂನ್‌ಗುನ್ಯಾ ಭೀತಿ

04:54 PM Aug 24, 2019 | Team Udayavani |

ಬಿ. ರಂಗಸ್ವಾಮಿ
ತಿಪಟೂರು:
ತಾಲೂಕು ಆಡಳಿತವಾಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ಸ್ವಚ್ಛತೆ ಸೇರಿದಂತೆ ಆರೋಗ್ಯದ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಗಳನ್ನು ವಹಿಸದ ಕಾರಣ ನಗರ ಸೇರಿದಂತೆ ತಾಲೂಕಾ ದ್ಯಂತ ಸಾಂಕ್ರಾಮಿಕ ರೋಗಗಳಿಂದ ಜನರು ತತ್ತರಿ ಸುತ್ತಿದ್ದು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಮುಂದೆ ಚಿಕಿತ್ಸೆಗಾಗಿ ಸಾಲುಗಟ್ಟಿ ನಿಲ್ಲುವಂತಾಗಿದೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳ ಜೊತೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಗ್ರಾಮೀಣ ಹಾಗೂ ನಗರಾದ್ಯಂತ ಸ್ವಚ್ಛತೆಯ ಕೊರತೆಯಿಂದಾಗಿ ನಾನಾ ರೀತಿಯ ಸೊಳ್ಳೆಗಳು, ವೈರಸ್‌ಗಳು ವಿಪ ರೀತವಾಗಿ ಹರಡಿದ್ದು ಅಮಾಯಕ ಜನರು ಚಿಕೂನ್‌ಗುನ್ಯಾ, ಡೆಂಘೀ ಸೇರಿದಂತೆ ವಿವಿಧ ರೀತಿಯ ಜ್ವರಗಳ ಬಾಧೆಯಿಂದ ಗಂಟಲು ನೋವು, ತಲೆನೋವು, ಕೈಕಾಲು ನೋವು, ಕೀಲುಗಳಲ್ಲಿ ನೋವು, ವಾಂತಿ- ಭೇದಿ ಸೇರಿದಂತೆ ದಿನಬಿಟ್ಟು ದಿನ ಬರುತ್ತಿರುವ ಜ್ವರದಿಂದ ಬಳಲುತ್ತಿದ್ದಾರೆ. ಬಹು ತೇಕ ಮನೆಗಳಲ್ಲಿ ದೊಡ್ಡವರು-ಮಕ್ಕಳಾದಿಯಾಗಿ ಒಂದಿಲ್ಲೊಂದು ರೋಗಗಳಿಗೆ ತುತ್ತಾಗುತ್ತಿದ್ದು ಆಸ್ಪತ್ರೆಗೆ ತರೆಳುವವರ ಮಂದಿ ಹೆಚ್ಚಾಗಿದ್ದಾರೆ. ಆದರೆ, ಅಧಿಕಾರಗಳ ಬೇಜವಾ ಬ್ದಾರಿ ಇಂತಹ ಬರಗಾಲದ ಪರಿಸ್ಥಿತಿಯಲ್ಲಿಯೂ ಬಡ ಮತ್ತು ಮಧ್ಯಮ ವರ್ಗದ ಜನರು ಆಸ್ಪತ್ರೆ ಖರ್ಚಿಗೆ ಪರದಾಡುವ ಸ್ಥಿತಿ ಎದುರಾಗಿದೆ.

ಸ್ವಚ್ಛತೆ ಮರೀಚಿಕೆ: ತಾಲೂಕಿನ ಬಹುತೇಕ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳು ತಿಪ್ಪೆಗುಂಡಿಗಳಿಂದ ಕೂಡಿದ್ದು, ತ್ಯಾಜ್ಯ ನೀರು ಹರಿಯಲು ಸರಿಯಾದ ಒಳಚರಂಡಿ ವ್ಯವಸ್ಥೆಯಿಲ್ಲ. ಬಹಳಷ್ಟು ಕಡೆ ಮನೆ ನೀರು ಓಣಿ, ಬೀದಿ, ಮನೆ ಪಕ್ಕದ ಚರಂಡಿಗಳಲ್ಲೇ ನಿಂತು ಕಲುಷಿತಗೊಂಡು ಡೆಂಘೀ, ಚಿಕೂನ್‌ ಗುನ್ಯಾದಂಥ ರೋಗಾಣುಗಳು ಉತ್ಪತ್ತಿಯಾಗುತ್ತಿವೆ. ಕುಡಿವ ನೀರಿನ ಟ್ಯಾಂಕ್‌ಗಳನ್ನು ತೊಳೆವ ಗೋಜಿಗೂ ಹೋಗಲ್ಲ. ಸೊಳ್ಳೆಗಳ ನಿಯಂತ್ರಣಕ್ಕಾಗಿ ಚರಂಡಿಗಳಿಗೆ ಕೀಟ ನಾಶಕ ಸಿಂಪಡಣೆ ಮಾಡಿ ಎಷ್ಟೋ ವರ್ಷಗಳಾಗಿದೆ. ಗ್ರಾಪಂ ಅಧಿಕಾರಿಗಳಾಗಲಿ, ತಾಲೂಕು ಆರೋಗ್ಯಾಧಿ ಕಾರಿಗಳಾಗಲಿ ಕ್ರಮಕೈಗೊಳ್ಳದೆ ಅಮಾಯಕ ಜನರ ಜೀವದ ಮೇಲೆ ಚಲ್ಲಾಟವಾಡುತ್ತಿದ್ದಾರೆ ಎಂಬುದು ನಾಗರಿಕರ ದೂರಾಗಿದೆ.

ಹಳ್ಳಿಗಳಿಗೆ ತೆರಳದ ವೈದ್ಯರು: ಗ್ರಾಮಗಳ ಸಾಕಷ್ಟು ಜನರು ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಾಲೂಕು ಆರೋಗ್ಯಾಧಿಕಾರಿಗಳ ಇಲಾಖೆಯಲ್ಲಿ ಯಾವೊಬ್ಬ ಅಧಿಕಾರಿಗಳು ಹಳ್ಳಿಗಳಿಗೆ ಸರಿಯಾಗಿ ತೆರಳದೆ ಇಲಾಖೆಯ ಇತರೆ ಕಾರ್ಯಕ್ರಮಗಳ ಬಗ್ಗೆ ಇಲಾಖೆಯಲ್ಲೆ ನೆಪ ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ: ಜ್ವರ ಬಾಧೆ ಯಿಂದ ಬಳಲಿ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಹಣವಿಲ್ಲದೆ ಬಡವರು, ಮಧ್ಯಮರ್ವದವರು ಸಾರ್ವ ಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದೇ. ದಾಖಲಾಗಿ ಹೆಚ್ಚು 5,6.10ಗಂಟೆಗಳ ಬಳಿಕ ವೈದ್ಯರು ರೋಗಿಗಳನ್ನು ನೋಡಿದ ಉದಾಹರಣೆಗಳಿವೆ. ಪರೀಕ್ಷೆ ಮಾಡಲು ಪರದಾಡಿಸಿದ ಘಟನೆಗಳೂ ನಡೆದಿವೆ. ಆಸ್ಪತ್ರೆಯಲ್ಲೇ ಸೊಳ್ಳೆಕಾಟವೂ ಹೆಚ್ಚಿದೆ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಮೂಗು ಮುಚ್ಚು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ರೋಗಿಗಳ ದೂರಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next