Advertisement

ಲೋಕಾ ಕಾಯ್ದೆ ತಿದ್ದುಪಡಿಗೆ ಚಿಂತನೆ

06:05 AM Nov 20, 2018 | Team Udayavani |

ಬೆಂಗಳೂರು: ಲೋಕಾಯುಕ್ತ ಕಾಯ್ದೆಗೆ ಸಣ್ಣ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಯಾವುದಾದರೂ ಪ್ರಕರಣದಲ್ಲಿ ತನಿಖೆ ನಡೆಸಲು ತಾವು ಅನರ್ಹ ಎಂದು ಲೋಕಾಯುಕ್ತರಿಗೆ ಅನಿಸಿದರೆ ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಪ್ರಕರಣದ ತನಿಖೆ ಉಪ ಲೋಕಾಯುಕ್ತರು ಕೈಗೊಳ್ಳಲು ಅವಕಾಶ ಕಲ್ಪಿಸುವ ತಿದ್ದುಪಡಿ ಇದಾಗಿದೆ ಎಂದು ತಿಳಿಸಿದರು.

Advertisement

ಹಿಂದಿನ ಲೋಕಾಯುಕ್ತರೊಬ್ಬರ ಮೇಲೆಯೇ ದೂರು ಬಂದಾಗ ಅವರೇ ತನಿಖೆ ನಡೆಸಲು ಸಾಧ್ಯವಾಗದೆ ಮುಂದೇನು? ಎಂಬ ಪ್ರಶ್ನೆ ಉದ್ಭವಿಸಿತ್ತು. ಹೀಗಾಗಿ, ಅಂತಹ ಪ್ರಸಂಗ ಎದುರಾದರೆ ಅಥವಾ ಯಾವುದೇ ಪ್ರಕರಣದ ತನಿಖೆ ನಡೆಸಲು ತಾವು ಅನರ್ಹ ಎಂದು ಲೋಕಾಯುಕ್ತರು ಪರಿಗಣಿಸಿದರೆ ಉಪ ಲೋಕಾಯುಕ್ತರು ತನಿಖೆ ನಡೆಸಲು ಅವಕಾಶ ಕೊಡಲು ತಿದ್ದುಪಡಿ ಮಾಡಲಾಗುವುದು. ಹಿಂದಿನ ಲೋಕಾಯುಕ್ತರು ಈ ಬಗ್ಗೆ ಶಿಫಾರಸು ಮಾಡಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next