Advertisement

Chennai: ಕದ್ದಿದ್ದ ಪ್ರಶಸ್ತಿ ಮತ್ತೆ ಹಿಂದಿರುಗಿಸಿ ನಿರ್ದೇಶಕರಿಗೆ ಶುಭಕೋರಿದ ಕಳ್ಳರು!

12:08 AM Feb 15, 2024 | Team Udayavani |

ಚೆನ್ನೈ: ಕಳ್ಳರಿಗೂ ಆತ್ಮಸಾಕ್ಷಿಯಿದೆ ಎಂದರೆ ಒಂದು ಕ್ಷಣ ನಂಬಲು ಕಷ್ಟವಾಗುತ್ತದೆ. ಆದರೆ ಸಿನಿಮೀಯ ಎಂಬಂತೆ, ಕಳ್ಳರ ಗ್ಯಾಂಗ್‌ ಕದ್ದಿದ್ದ ನಿರ್ದೇಶಕರೊಬ್ಬರ ಪ್ರಶಸ್ತಿಯನ್ನು ಹಿಂದಿರುಗಿಸಿ, ಇನ್ನೂ ಉತ್ತಮ ಚಿತ್ರಗಳನ್ನು ನಿರ್ಮಿಸುವಂತೆ ಶುಭಕೋರಿದೆ.

Advertisement

ರಾಷ್ಟ್ರ ಪ್ರಶಸ್ತಿ ವಿಜೇತ ಮಣಿಕಂದನ್‌, ಚೆನ್ನೈನಲ್ಲಿ ತಂಗಿದ್ದ ವೇಳೆ, ಕಳ್ಳರ ಗುಂಪೊಂದು ಮಧುರೆ ಸಮೀಪದ ಉಸಿಲಂಪಟ್ಟಿಯ ಅವರ ನಿವಾಸಕ್ಕೆ ನುಗ್ಗಿ ಚಿನ್ನಾಭರಣ,ನಗದು ಸೇರಿದಂತೆ ಅಪಾರ ಸಂಪತ್ತು ದೋಚಿದ್ದರು. ನಂತರ ಕ್ಷಮೆ ಕೋರಿ, 2 ರಾಷ್ಟ್ರ ಪ್ರಶಸ್ತಿ, ಕ್ಷಮಾಪಣಾ ಪತ್ರವನ್ನು ನಿರ್ದೇಶಕರ ಮನೆಯ ಗೇಟ್‌ಗೆ ಸಿಲುಕಿಸಿ ಕಾಲ್ಕಿತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next