Advertisement

Thekkatte: ಕಳ್ಳರ ಜಾಡು ಹಿಡಿದು ಬೆನ್ನಟ್ಟಿ ಬಂದ ಅಟೋ ಚಾಲಕರ ತಂಡ

02:13 PM Oct 14, 2023 | Team Udayavani |

ತೆಕ್ಕಟ್ಟೆ: ಇಲ್ಲಿನ ಹೈಕಾಡಿ ಎಂಬಲ್ಲಿ ಚಿನ್ನದ ಸರಕ್ಕೆ ಬಣ್ಣ ಹಾಕಿ ಕೊಡುವ ನೆಪದಲ್ಲಿ ‌ಮಹಿಳೆಯ ಚಿನ್ನದ ಸರವನ್ನು  ಎಗರಿಸಿ ಕಳ್ಳರ ತಂಡವೊಂದು ಅಟೋ ರಿಕ್ಷಾದಲ್ಲಿ ಪರಾರಿಯಾಗಿದ್ದು, ಬಿದ್ಕಲ್ ಕಟ್ಟೆ ಪ್ರಮುಖ ಸರ್ಕಲ್ ಇಳಿದು ಬೇರೊಂದು ರಿಕ್ಷಾದಲ್ಲಿ ಪರಾರಿಯಾಗಿದ್ದು ಸಂಶಯಗೊಂಡ   ಅಟೋ ಚಾಲಕರು ಕಳ್ಳರ ಜಾಡು ಹಿಡಿದು ಬೆನ್ನಟ್ಟಿದ ಘಟನೆ ಬೆಳಗ್ಗೆ ಗಂಟೆ 10.55 ರ ಸುಮಾರಿಗೆ ಸಂಭವಿಸಿದೆ.

Advertisement

ಇದನ್ನೂ ಓದಿ: Heart attack: ಬಿದ್ಕಲ್ ಕಟ್ಟೆ; ಬಸ್ ಸ್ಟ್ಯಾಂಡ್ ಸಮೀಪ ಹೃದಯಾಘಾತದಿಂದ ವ್ಯಕ್ತಿ ಸಾವು

ಎರಡು ಅಟೋ ರಿಕ್ಷಾವನ್ನು ಬದಲಿಸಿದ ಕಳ್ಳರು: ಹಿಂದಿ ಭಾಷೆಯಲ್ಲಿ ವ್ಯವಹರಿಸುವ ತಂಡ ಹೈಕಾಡಿಯಿಂದ ಕಕ್ಕುಂಜೆ ಕ್ರಾಸ್ ಅಲ್ಲಿಂದ ಬಿದ್ಕಲ್ ಕಟ್ಟೆ ಬಂದಿಳಿದು ನಂತರ ಹುಣ್ಸೆಮಕ್ಕಿ ಕಡೆಗೆ ಅಟೋದಲ್ಲಿ ಸಾಗಿದ್ದಾರೆ.

ಸಿಸಿ ಕೆಮರಾ ದಲ್ಲಿ ಸೆರೆ: ಅಟೋದಿಂದ ಬಿದ್ಕಲ್ ಕಟ್ಟೆ ಬಸ್ ಸ್ಟ್ಯಾಂಡ್ ನಲ್ಲಿ ಇಳಿದು ಮತ್ತೊಂದು ಅಟೋದಲ್ಲಿ ಇಬ್ಬರು ವ್ಯಕ್ತಿಗಳು ತೆರಳುವ ದೃಶ್ಯ ಗಳು  ಸಿಸಿ‌ ಕೆಮರಾದಲ್ಲಿ ಸೆರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next