Advertisement

ಬೆಂಗಳೂರು: ಕುರುಬರಹಳ್ಳಿ ಸೇತುವೆ ಬಳಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರ ಸುಲಿಗೆಗೆ ಸಿದ್ದತೆ ನಡೆಸಿದ್ದ ಏಳು ಮಂದಿ ದರೋಡೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಒಕ್ಕಲಿಗ ಮಾರಮ್ಮ ಟೆಂಪಲ್‌ ಸಮೀಪದ ನಿವಾಸಿ ಚೇತನ್‌ ಅಲಿಯಾಸ್‌ ಹಂದಿ ಚೇತು (28), ಬಸವೇಶ್ವರ ನಗರದ ಕಿರ್ಲೋಸ್ಕರ್‌ ಕಾಲೋನಿಯ ನಿರಂಜನ (23), ಕಮಲನಗರದ ರಾಜು (34), ಉಮೇಶ್‌ (32), ಸಿ. ಜಗದೀಶ್‌ (28), ಚೇತನ್‌ (29), ಹೆಸರಘಟ್ಟದ ವೆಂಕಟೇಶ್‌ (28) ಬಂಧಿತರು.

ಆರೋಪಿಗಳಿಂದ ಕಬ್ಬಿಣದ ರಾಡ್‌ಗಳು, ಹಾಕಿ ಸ್ಟಿಕ್‌ಗಳು, ಕಬ್ಬಿಣದ ಪೈಪ್‌ಗ್ಳು, ಕಾರದಪುಡಿ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಆರೋಪಿಗಳು ಒಂಟಿಯಾಗಿ ಓಡಾಡುವವರು ಹಾಗೂ ಮಹಿಳೆಯರ ಜತೆ ಬರುವವರನ್ನು ಗುರಿಯಾಗಿಸಿಕೊಂಡು ದರೋಡೆಗೆ ಸಿದ್ದತೆ ನಡೆಸಿದ್ದರು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ, ನಗದು, ಮೊಬೈಲ್‌ ದರೋಡೆ ಮಾಡುವುದು ಉದ್ದೇಶವಾಗಿತ್ತು. ಈ ಮಾಹಿತಿ ಆಧರಿಸಿ ದಾಳಿ ನಡೆಸಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಮಹಾಲಕ್ಷ್ಮೀ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next