Advertisement

Karkala ದಂಪತಿ ನಿದ್ದೆಯಲ್ಲಿದ್ದಾಗ ಕಳ್ಳರ ಕೈಚಳಕ

12:30 AM Mar 26, 2024 | Team Udayavani |

ಕಾರ್ಕಳ: ಮನೆಮಂದಿ ರಾತ್ರಿ ಊಟ ಮುಗಿಸಿ ಮಲಗಿ ಗಾಢ ನಿದ್ದೆಯಲ್ಲಿದ್ದ ವೇಳೆ ಕಳ್ಳರು ಕಿಟಕಿಯ ಬಾಗಿಲಿನ ಚಿಲಕ ಮುರಿದು ಮನೆಯ ಒಳನುಗ್ಗಿ ಕೋಣೆಯ ಕಪಾಟಿನಲ್ಲಿರಿಸಿದ್ದ 2.25 ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಕಾರ್ಕಳದ ಜೋಡುರಸ್ತೆಯಲ್ಲಿ ಮಾ. 25ರಂದು ನಡೆದಿದೆ.

Advertisement

ಜೋಡುರಸ್ತೆಯ ಸಾರಸ್ವತ ನಗರದ ನಿವಾಸಿ ಉದ್ಯಮಿ ಜಗದೀಶ್‌ ನಾಯಕ್‌ ಅವರ ಮನೆಯಲ್ಲಿ ಕಳ್ಳತನವಾಗಿದೆ. ದಂಪತಿ ಊಟ ಮುಗಿಸಿ ಮಲಗಿದ ಅನಂತರ ಮುಂಜಾನೆ ವೇಳೆ ಬಾಗಿಲು ತೆರೆದ ಸದ್ದು ಕೇಳಿ ಜಗದೀಶ್‌ ಅವರು ಹೊರಗಡೆ ಬಂದಿದ್ದು, ಮುಖ್ಯ ದ್ವಾರ ತೆರದ ಸ್ಥಿತಿಯಲ್ಲಿತ್ತು.

ಇದಾದ ಬಳಿಕ ಕಪಾಟು ಪರಿಶೀಲಿಸಿದಾಗ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿರುವುದು ಗೊತ್ತಾ ಗಿದೆ. ಕಪಾಟಿನಲ್ಲಿಟ್ಟಿದ್ದ ನಗದು ಕಾಣೆಯಾಗಿತ್ತು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next