Advertisement

ಕೊಡ-ಬಕೆಟ್‌ನಲ್ಲಿ ಡೀಸೆಲ್ ತುಂಬಿಕೊಂಡು ಹೋದ್ರು

07:24 AM Jun 04, 2019 | Suhan S |

ಭಟ್ಕಳ: ಡೀಸೆಲ್ ಟ್ಯಾಂಕರ್‌ಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸಾಕಷ್ಟು ಡೀಸೆಲ್ ಸೋರಿಕೆಯಾಗಿ ಸ್ಥಳೀಯರು ಬಕೆಟ್, ಬಿಂದಿಗೆ, ಕ್ಯಾನ್‌ಗಳಲ್ಲಿ ತುಂಬಿಕೊಂಡು ಹೋದ ಘಟನೆ ತಾಲೂಕಿನ ಮುರ್ಡೇಶ್ವರ ಸಮೀಪದ ಬೆಂಗ್ರೆಯ ಅಕ್ಷಯ ಪೆಟ್ರೋಲ್ ಬಂಕ್‌ ಬಳಿ ನಡೆದಿದೆ. ಸೋಮವಾರ ಮಧ್ಯಾಹ್ನ 1.45ರ ಸುಮಾರಿಗೆ ಬೇಂಗ್ರೆಯ ಅಕ್ಷಯ ಪೆಟ್ರೋಲ್ ಬಂಕ್‌ ಹತ್ತಿರ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೊರಟಿದ್ದ ಡೀಸೆಲ್ ಟ್ಯಾಂಕರ್‌ಗೆ ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ಹೊರಟ ಟಿಪ್ಪರ್‌ ಲಾರಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಡೀಸೆಲ್ ಟ್ಯಾಂಕರ್‌ ಜಖಂಗೊಂಡು ಡೀಸೆಲ್ ಸೋರಿಕೆಯಾಗಲು ಶುರುವಾಗಿದೆ. ಇದರಿಂದ ಕೆಲಹೊತ್ತು ಆತಂಕ ಉಂಟಾಗಿತ್ತು. ಆದರೆ ತಕ್ಷಣ ಪೊಲೀಸರು ಹಾಗೂ ಅಗ್ನಿ ಶಾಮಕದಳದವರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ನಂತರ ಆಗಮಿಸಿದ ಸಿಪಿಐ ಕೆ.ಎಲ್. ಗಣೇಶ ಅವರು ಡೀಸೆಲ್ ಸೋರಿಕೆ ನಿಲ್ಲಿಸಲು ಸೂಕ್ತ ಕ್ರಮ ತೆಗೆದುಕೊಂಡರು. ರಸ್ತೆಯಲ್ಲಿ ಡಿಸೇಲಿ ಸೋರಿಕೆಯಿಂದಾಗಿ ಮತ್ತೆ ಆಗಬಹುದಾದ ಅನಾಹುತ ತಪ್ಪಿಸಲು ಅಗ್ನಿಶಾಮಕ ದಳದವರು ರಸ್ತೆ ಮೇಲೆ ಸಾಬೂನಿನ ನೀರು ಹಾಕಿ ತೊಳೆದು ಸ್ವಚ್ಛಗೊಳಿಸಿದರು. ಮಂಗಳೂರಿನಿಂದ ಶಿರಸಿಗೆ ಹೊಗುತ್ತಿದ್ದ ಡೀಸೆಲ್ ಟ್ಯಾಂಕರ್‌ ಇದಾಗಿದ್ದು, ಸುಮಾರು 3 ಸಾವಿರ ಲೀಟರ್‌ ಡೀಸೆಲ್ ಸೋರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next