Advertisement

ಅವರೆ ಮೇಳಕ್ಕೆ ಅದ್ಧೂರಿ ಚಾಲನೆ

11:28 AM Feb 09, 2018 | Team Udayavani |

ಬೆಂಗಳೂರು: ನಾಗರಬಾವಿಯಲ್ಲಿ ಮೂರನೇ ವರ್ಷದ ಅವರೆ ಬೇಳೆ ಮೇಳಕ್ಕೆ ಗುರುವಾರ ಅದ್ಧೂರಿ ಚಾಲನೆ ದೊರಕಿತು. ಮಾಗಡಿ ರೈತರು ಬೆಳೆದ ಅವರೆ ಬೆಳೆಗೆ ನೇರ ಮಾರುಕಟ್ಟೆ ಕಲ್ಪಿಸುವುದರ ಜತೆಗೆ ವಿವಿಧ ನಮೂನೆಯ ಅವರೆ ಬೇಳೆ ಖಾದ್ಯಕ್ಕೆ ಒಂದು ವಾರ ನಡೆಯುವ ಈ ಮೇಳ ವೇದಿಕೆಯಾಗಿದೆ.

Advertisement

ಸುಮಾರು 50 ರೈತರು ಇದರಲ್ಲಿ ಭಾಗವಹಿಸಿದ್ದು, ಅಂದಾಜು ಎರಡು ಟನ್‌ ಅವರೆ ಬೇಳೆ ಮಾರಾಟವಾಗುವ ನಿರೀಕ್ಷೆ ಇದೆ. ವಾಸವಿ ಕಾಂಡಿಮೆಂಟ್ಸ್‌ ಕಳೆದ 18 ವರ್ಷಗಳಿಂದ ವಿ.ವಿ.ಪುರಂನಲ್ಲಿ ಈ ಮೇಳ ನಡೆಸಿಕೊಂಡು ಬರುತ್ತಿದ್ದು, ಬೇಡಿಕೆ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ನಾಗರಬಾವಿಗೆ ವಿಸ್ತರಿಸಲಾಗಿದೆ.

ಕಳೆದ ವರ್ಷ ಈ ಮೇಳದಲ್ಲಿ 50 ಟನ್‌ ಅವರೆ ಮಾರಾಟವಾಗಿದ್ದು, ಹತ್ತು ಲಕ್ಷ ರೂ. ವ್ಯಾಪಾರ ಆಗಿತ್ತು. ಈ ವರ್ಷ ಇದಕ್ಕಿಂತ ಹೆಚ್ಚು ವ್ಯಾಪಾರ-ವಹಿವಾಟಿನ ನಿರೀಕ್ಷೆ ಇದೆ ಎಂದು ಕಾಂಡಿಮೆಂಟ್ಸ್‌ ಮಾಲೀಕರಾದ ಸ್ವಾತಿ ತಿಳಿಸುತ್ತಾರೆ. 

ದೋಸೆ, ವಡೆ, ಪಡ್ಡು, ಜಿಲೇಬಿ, ಗೋಬಿ ಮಂಚೂರಿ, ರಾಗಿಮುದ್ದೆ ಸೇರಿದಂತೆ ಸುಮಾರು 90 ಪ್ರಕಾರದ ಖಾದ್ಯಗಳನ್ನು ಬರೀ ಅವರೆ ಬೇಳೆಯಲ್ಲಿ ತಯಾರಿಸಲಾಗಿದ್ದು, ಭೇಟಿ ನೀಡಿದವರ ಬಾಯಲ್ಲಿ ನೀರೂರಿಸುತ್ತವೆ. ಚಿತ್ರ ನಿರ್ಮಾಪಕ ಚಿನ್ನೆಗೌಡ ಮೇಳಕ್ಕೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next