Advertisement

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

12:55 AM May 11, 2024 | Team Udayavani |

ಪುತ್ತೂರು: ರಾಜ್ಯದ ನಾನಾ ಭಾಗಗಳಲ್ಲಿ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ನೋಡಿ ವಿದ್ಯಾರ್ಥಿ ಗಳು ಸಂಭ್ರಮಿಸುತ್ತಿದ್ದರೆ ಇಲ್ಲಿ ಮಾತ್ರ ತೇರ್ಗಡೆಯಾಗಿ ದ್ದರೂ ಸಂಭ್ರಮಿಸಲು ಬಾಲಕನೇ ಇರಲಿಲ್ಲ !

Advertisement

ಎಸೆಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆ ಯಲ್ಲಿದ್ದ ಸುಳ್ಯ ತಾಲೂಕಿನ ಬೆಳ್ಳಾರೆ ಕೆಪಿಎಸ್‌ನ ಎಸೆಸೆಲ್ಸಿ ವಿದ್ಯಾರ್ಥಿ, ಬೆಳ್ಳಾರೆ ಗ್ರಾಮದ ಉಮ್ಮಿಕ್ಕಳ ನಿವಾಸಿ ಅಬ್ದುಲ್‌ ರಾಝೀಕ್‌ ಎ. 11ರಂದು ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದ. ಬೆಳ್ಳಾರೆಯಿಂದ ಕುಂಡಡ್ಕದ ಅಜ್ಜಿ ಮನೆಗೆ ಸ್ಕೂಟಿಯಲ್ಲಿ ಸಹಸವಾರನಾಗಿ ತೆರಳುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿತ್ತು.

ಘಟನೆ ನಡೆದು ಒಂದು ತಿಂಗಳು ಸಮೀಪಿಸುತ್ತಿದ್ದು ಇದೀಗ ಫಲಿತಾಂಶ ಬಂದಿದೆ. ರಾಝೀಕ್‌ 370 ಅಂಕ ಪಡೆದು ಉತ್ತೀರ್ಣನಾಗಿ ದ್ದಾನೆ. ಮನೆ ಮಂದಿ ಮಾತ್ರ ಫಲಿತಾಂಶ ಕಂಡು ಸಂಭ್ರಮಿಸಲು ಮಗನೇ ಇಲ್ಲ ಎಂದು ದುಃಖ ತೋಡಿಕೊಳ್ಳುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next