Advertisement

landslide ಮುನ್ನೆಚ್ಚರಿಕೆ ಇರಲಿಲ್ಲ: ಅಮಿತ್‌ ಶಾಗೆ ಕೇರಳ ಸಿಎಂ ತರಾಟೆ

11:50 PM Jul 31, 2024 | Team Udayavani |

ತಿರುವನಂತಪುರ: ವಯನಾಡ್‌ ಭೂ ಕುಸಿತಕ್ಕೆ ಸಂಬಂಧಿಸಿದಂತೆ ಕೇಂದ್ರದ ಸಂಸ್ಥೆಗಳೂ ಸೇರಿ ಯಾರೂ ಒಂದು ಬಾರಿಯೂ ಮುನ್ನೆಚ್ಚರಿಕೆ ನೀಡಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

Advertisement

ಕೇರಳಕ್ಕೆ ನೀಡಿದ್ದ ಎಚ್ಚರಿಕೆಗಳನ್ನು ಅಲ್ಲಿನ ಸರಕಾರ ನಿರ್ಲಕ್ಷಿಸಿತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆಗೆ ಪಿಣ ರಾಯಿ ಈ ಮೂಲಕ ತಿರುಗೇಟು ನೀಡಿದ್ದಾರೆ.

ತಿರುವನಂತಪುರನಲ್ಲಿ ಮಾಧ್ಯಮಗಳನ್ನು ದ್ದೇಶಿಸಿ ಮಾತನಾಡಿರುವ ಪಿಣರಾಯಿ ಅವರು ಐಎಂಡಿ, ಭಾರತೀಯ ಭೌಗೋಳಿಕ ಸರ್ವೇಕ್ಷಣ ಸಂಸ್ಥೆ (ಜಿಎಸ್‌ಐ) ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ)ವೂ ಸೇರಿ ಯಾರೂ ರೆಡ್‌ ಅಲರ್ಟ್‌ ನೀಡಿಲ್ಲ. ಐಎಂಡಿ ಆರೆಂಜ್‌ ಅಲರ್ಟ್‌ ನೀಡಿತ್ತು. ಇದು 115 ಮಿ.ಮೀ.ನಿಂದ 204 ಮಿ.ಮೀ.ವರೆಗಿನ ಮಳೆ ಸೂಚಿಸುತ್ತದೆ. ಆದರೆ ಮುಂಡಕೈನಲ್ಲಿ 572 ಮಿ.ಮೀ. ಮಳೆಯಾಗಿದೆ. ಭೂ ಕುಸಿತವಾದ ಬಳಿಕ ಬೆಳಗ್ಗೆ 6 ಗಂಟೆಗೆ ಐಎಂಡಿ ರೆಡ್‌ ಅಲರ್ಟ್‌ ನೀಡಿದೆ ಎಂದು ಅವರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next