Advertisement

ಬಿಟ್ ಕಾಯಿನ್ ವಿಷಯದಲ್ಲಿ ಸರಕಾರ ಮುಚ್ಚಿಡುವಂತಹದ್ದು ಏನೂ ಇಲ್ಲ: ಆರಗ ಜ್ಞಾನೇಂದ್ರ

01:44 PM Sep 15, 2022 | Team Udayavani |

ಬೆಂಗಳೂರು: ಬಿಟ್ ಕಾಯಿನ್ ವಿಷಯದಲ್ಲಿ ಸರಕಾರ ಮುಕ್ತವಾಗಿದ್ದು, ಯಾರನ್ನೂ ರಕ್ಷಿಸುವ ಅಥವಾ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ವಿಧಾನ ಪರಿಷತ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

Advertisement

ವಿಧಾನ ಪರಿಷತ್ ನಲ್ಲಿ, ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಶಾಸಕ ಶರವಣ ಅವರ ಪ್ರಶ್ನೆಗೆ ಉತ್ತರಿಸಿ, ಬಿಟ್ ಕಾಯಿನ್ ಹಗರಣದಲ್ಲಿ, ಹಣ ಕಳೆದು ಕೊಂಡ ಬಗ್ಗೆ, ಇದುವರೆಗೆ ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ಮಾಹಿತಿ ನೀಡಿದರು.

ಬಿಟ್ ಕಾಯಿನ್ ವಿಷಯದಲ್ಲಿ ಹಲವಾರು ಬಾರಿ ಸದನದಲ್ಲಿ ನಡೆದ ಚರ್ಚೆಗೆ, ಉತ್ತರ ಒದಗಿಸಲಾಗಿದ್ದು, ಸದಸ್ಯರು ಈ ಕುರಿತು ಯಾವುದೇ ಮಾಹಿತಿ ನೀಡಿದರೆ, ತನಿಖೆ ನಡೆಸಲಾಗುವುದು ಎಂದರು.

ಇದನ್ನೂ ಓದಿ:ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿ ಶಂಕರ ಪಾಗೋಜಿ ನೇಮಕ

ಬಿಟ್ ಕಾಯಿನ್ ವಿವಾದದ ಕುರಿತು ಅಮೆರಿಕಾ ಸಂಯುಕ್ತ ಸಂಸ್ಥಾನ ದಲ್ಲಿಯೂ ಅಲ್ಲಿನ ಪೊಲೀಸರು ತನಿಖೆ ನಡೆಸಿದ್ದು, ಕರ್ನಾಟಕದ ಅಥವಾ ದೇಶದ ಯಾರ ಬಗ್ಗೆಯೂ, ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದಿಲ್ಲ, ಎಂದು ಸಚಿವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next