Advertisement

ಕಾಂಗರೂಗಳಿಂದ ಕೆಣಕುವ ಆಟವಿಲ್ಲ: ಕೊಹ್ಲಿ ಖುಷ್‌

06:05 AM Nov 16, 2018 | Team Udayavani |

ಮುಂಬಯಿ: ಆಸ್ಟ್ರೇಲಿಯ ಪ್ರವಾಸವೆಂದರೆ ಅದು ಕ್ರಿಕೆಟಿಗರಿಗೊಂದು ದೊಡ್ಡ ಸವಾಲು. ಆಸ್ಟ್ರೇಲಿಯಕ್ಕೆ ತೆರಳುವುದೆಂದರೆ ವಿವಾದದ ಹೆಬ್ಟಾಗಿಲು ತೆರೆಯಿತೆಂದೇ ಅರ್ಥ. 

Advertisement

ಅಂಗಳದಲ್ಲಿ ಎದುರಾಳಿ ಆಟಗಾರರನ್ನು ಕೆಣಕುವುದರಲ್ಲಿ ಆಸೀಸ್‌ ಕ್ರಿಕೆಟಿಗರು ಎತ್ತಿದ ಕೈ. ಇದಕ್ಕೆ ಆ್ಯಂಡ್ರೂé ಸೈಮಂಡ್ಸ್‌-ಹರ್ಭಜನ್‌ ಸಿಂಗ್‌ ನಡುವಿನ “ಮಂಕಿ ಗೇಟ್‌’ ಪ್ರಕರಣಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ.

ಇನ್ನೇನು ಟೀಮ್‌ ಇಂಡಿಯಾ ಮತ್ತೂಂದು ಆಸ್ಟ್ರೇಲಿಯಕ್ಕೆ ಪ್ರವಾಸಕ್ಕೆ ಅಣಿಯಾಗಿದೆ. ಆದರೆ ಈ ಬಾರಿ ಇಂಥ ಸ್ಲೆಡಿjಂಗ್‌ ಪ್ರಕರಣ ದಾಖಲಾಗುವ ಸಾಧ್ಯತೆ ಕಂಡುಬರುತ್ತಿಲ್ಲ. ಕಾರಣ, ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಯ “ನೋ ಸ್ಲೆಡಿjಂಗ್‌ ಪಾಲಿಸಿ’. ಗುರುವಾರ ಕಾಂಗರೂ ನಾಡಿಗೆ ವಿಮಾನ ಏರುವ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್‌ ಕೊಹ್ಲಿ ಇದೇ ವಿಷಯವನ್ನು ಪ್ರಸ್ತಾವಿಸಿ, ಯಾವುದೇ ವಾಗ್ವಾದಗಳಿಲ್ಲದೆ ಆಡುವುದಕ್ಕೆ ಖುಷಿ ಆಗುತ್ತದೆ ಎಂದರು.

“ಯಾವುದೇ ರೀತಿಯಿಂದಾದರೂ ಗೆಲ್ಲುವ’ ಸಿದ್ಧಾಂತ ಹೊಂದಿರುವ ಆಸ್ಟ್ರೇಲಿಯ, ಈ ಬಾರಿ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ನಿಷೇಧದಿಂದಾಗಿ ಶಕ್ತಿಹೀನವಾಗಿದೆ. ಹೀಗಾಗಿ ಭಾರತಕ್ಕೆ ಟೆಸ್ಟ್‌ ಸರಣಿ ಗೆಲ್ಲುವ ಸುವರ್ಣಾವಕಾಶ ಇದೆ ಎಂಬುದೊಂದು ಲೆಕ್ಕಾಚಾರ. ಆದರೂ ಇದೊಂದು ಕಠಿನ ಸವಾಲಿನ ಪ್ರವಾಸ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next