Advertisement

ಲಸಿಕೆ ಬಗ್ಗೆ ಅನಗತ್ಯ ಭಯ ಬೇಡ

08:05 PM Jan 04, 2022 | Team Udayavani |

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯಲ್ಲಿನ ಡಾ|ಆರ್‌ .ಬಿ.ಪಾಟೀಲ ಮಹೇಶ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ 15-18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಕಾರ್ಯ ಕೈಗೊಳ್ಳಲಾಯಿತು.

Advertisement

ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ಎಸ್‌.ಸಿ.ಬೇವೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಭಯ ಪಡದೆ ಲಸಿಕೆ ಪಡೆಯುವ ಮೂಲಕ ದೇಶವನ್ನು ಕೊರೊನಾ ಮುಕ್ತಗೊಳಿಸುವಲ್ಲಿ ಭಾಗಿಯಾಗಬೇಕು. ಲಸಿಕೆ ಬಗ್ಗೆ ಅನಗತ್ಯ ಭಯ ಬೇಡ ಎಂದರು.

ಹೆಗ್ಗೇರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಎಂ.ವಿಜಯಲಕ್ಷ್ಮೀ ಮಾತನಾಡಿ, ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಯಾವುದೇ ಭಯ ಪಡದೆ ಲಸಿಕೆ ಪಡೆಯಬೇಕೆಂದರು. ಕಾಲೇಜಿನ ಸುಮಾರು 711 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು. ಆಡಳಿತ ಮಂಡಳಿಯ ರಾಜಾ ದೇಸಾಯಿ, ಧಾರವಾಡ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ|ಪ್ರವೀಣ ಗೌರಿ, ಉಪ ಪ್ರಾಂಶುಪಾಲ ರಮೇಶ ಹೊಂಬಾಳೆ ಇನ್ನಿತರರು ಇದ್ದರು. ಪ್ರಾಂಶುಪಾಲ ಎಚ್‌.ಕೆ.ರಾಮ ಮೋಹನ ಸ್ವಾಗತಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next