Advertisement

ಸಾಂಗತ್ಯವಿಲ್ಲದ ಬಾಳು ಬಾಳಲ್ಲ

06:00 AM Oct 31, 2018 | |

ಬದುಕು ಸೋತಾಗ, ಆರೋಗ್ಯ ಕೆಟ್ಟಾಗ, ನೋವು, ನಲಿವು ಕೇಳಿಸಿಕೊಳ್ಳುವ ಒಂದು ಜೀವ ಬೇಕು. . ಸಂಗಾತಿಯ ಸಾಂಗತ್ಯವಿಲ್ಲದ ಬದುಕು ಒಮ್ಮೊಮ್ಮೆ ಜಿಗುಪ್ಸೆ ಮೂಡಿಸುತ್ತದೆ. ಹೆಂಡತಿಯ ಸಾಂಗತ್ಯ ಇಲ್ಲದ ಗಂಡನ ಬದುಕು ಹೇಗೆ ಅಪೂರ್ಣವೋ, ಗಂಡನಿಲ್ಲದ ಹೆಂಡತಿಯ ಬದುಕು ಕೂಡ ಅಷ್ಟೇ ಅಪೂರ್ಣ. 

Advertisement

ನನ್ನ ಪರಿಚಯದವರೊಬ್ಬರಿದ್ದರು. ತುಂಬಾ ದರ್ಪದ ಮನುಷ್ಯ. ತಾನು ಹೇಳಿದ್ದೇ ವೇದವಾಕ್ಯ ಅನ್ನುವ ಮನೋಭಾವದವರು. ಅವರಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದರು. ಹೆಂಡತಿ-ಮಕ್ಕಳು ಗಂಡನ ಮಾತಿಗೆ ಎದುರಾಡುತ್ತಿರಲಿಲ್ಲ, ಅವರು ಮನೆಗೆ ಬರುತ್ತಿ¨ªಾರೆ ಎಂದು ಸುಳಿವು ಸಿಕ್ಕಾಗ ಮನೆಮಂದಿಯೆಲ್ಲ ಗಪ್‌ಚುಪ್‌. ಅವರ ಊಟ-ತಿಂಡಿ ಎಲ್ಲವೂ ಶಿಸ್ತಿನ ಪ್ರಕಾರ ನಡೆಯಬೇಕಿತ್ತು. ಅವೆಲ್ಲವೂ ಹೆಂಡತಿಯ ಕೆಲಸವಾಗಿತ್ತು. ಕಾಲಕ್ರಮೇಣ, ಮಕ್ಕಳಿಗೆಲ್ಲ ಮದುವೆಯಾಯಿತು. ಒಂದು ದಿನ ಮನೆಯ ಯಜಮಾನಿ ಆಕಸ್ಮಿಕವಾಗಿ ಸತ್ತು ಹೋದರು. ಹೆಂಡತಿ ಇರುವಾಗ ಎಲ್ಲರ ಮೇಲೆ ದರ್ಪ ತೋರಿಸುತ್ತಿದ್ದ ಅವರು, ಹೆಂಡತಿ ಸತ್ತ ವರುಷದೊಳಗೆ ಬಾಲ ಮುದುರಿದ ಬೆಕ್ಕಿನಂತಾದರು. ತಾನು ಕಟ್ಟಿದ ಮನೆ ಬಿಟ್ಟು, ಮಕ್ಕಳ ಮನೆಯಲ್ಲಿ ಒಂದಷ್ಟು ಕಾಲ ಇರತೊಡಗಿದರು. 

ಮಗನ ಮನೆಯಲ್ಲಿ ಇವರ ಮಾತಿಗಿಂತ ಸೊಸೆಯ ಮಾತೇ ಹೆಚ್ಚು ನಡೆಯುತ್ತಿತ್ತು. ಸೊಸೆ ಕೊಟ್ಟಿದ್ದನ್ನು ತಿಂದು ಸೊÇÉೆತ್ತದೇ ಇರಬೇಕಾಯಿತು. ಇನ್ನು ಮಗಳ ಮನೆಯೇ ವಾಸಿ ಎಂದು ಅಲ್ಲಿಗೆ ಹೋದರೆ, ಮಗಳು ಒಂದಷ್ಟು ದಿನ ಸುಮ್ಮನಿದ್ದು ಆಮೇಲೆ ನಿಧಾನಕ್ಕೆ, “ಅಪ್ಪಾ, ತರಕಾರಿ ತೆಗೆದುಕೊಂಡು ಬಾ, ಗಿಡಗಳಿಗೆ ನೀರು ಹಾಕು, ಮಕ್ಕಳನ್ನು ಸ್ಕೂಲಿನಿಂದ ಕರೆದುಕೊಂಡು ಬಾ’ ಅನ್ನುವ ಕೆಲಸ ಹಚ್ಚುವುದಕ್ಕೆ ಶುರುಮಾಡಿದಳು. ಇನ್ನು ಟಿವಿ ನೋಡಿದರೆ, “ಮಕ್ಕಳು ಓದಲ್ಲ. ಈ ಟಿವಿ ಶೋ ಎÇÉಾ ಹಾಕಬೇಡಿ’ ಎಂದು ಅಳಿಯ ತಾಕೀತು ಮಾಡುವ ದನಿಯಲ್ಲಿಯೇ ಹೇಳಿದ. ತಾನೊಬ್ಬ ದಂಡಪಿಂಡ. ಹೆಂಡತಿ ಇರುವಾಗ ಇವರೆಲ್ಲ ನನಗೆ ಎಷ್ಟು ಭಯಪಡುತ್ತಿದ್ದರು. “ಅಪ್ಪಯ್ನಾ’ ಎಂದು ಬಾಯಿತುಂಬ  ಕರೆಯುತ್ತಿದ್ದರು. ಆದರೆ ಈಗ ಎಲ್ಲರೂ ಬದಲಾಗಿದ್ದಾರೆ. ಇವರು ಮಾಡಿದ್ದೆಲ್ಲ ನಾಟಕಾನಾ ಎಂಬಷ್ಟರ ಮಟ್ಟಿಗೆ ಅವರು ರೋಸಿ ಹೋಗಿದ್ದರು. ಕೊನೆಗೆ, ತಾನು ಕಟ್ಟಿದ ಮನೆ ಬಿಟ್ಟು ಮಕ್ಕಳ ಮನೆಗೆ ಅಲೆದು ಜೀವಮಾನವಿಡಿ ನೋವಿನಲ್ಲಿಯೇ ಕಳೆದರು. ಬಾಳಸಂಜೆಯಲ್ಲಿ ಅವರ ಮಾತು ಕೇಳಿಸಿಕೊಳ್ಳುವ ಯಾವ ಜೀವವೂ ಅವರ ಬಳಿ ಇರಲಿಲ್ಲ.

ಗೆಳತಿಯ ತಾಯಿಯೊಬ್ಬಳು ಗಂಡನ ಜತೆ ಬಾಳುವುದಕ್ಕೆ ಆಗದೇ ಮನೆಯಿಂದ ಹೊರಗೆ ಬಂದಿದ್ದರು. ಗಂಡು ದಿಕ್ಕಿಲ್ಲದ ಅವರ ಜೀವನವನ್ನು ಒಂದು ದಡಕ್ಕೆ ತಲುಪಿಸಲು ಸಾಕಷ್ಟು ಕಷ್ಟಪಟ್ಟಿದ್ದರು ಆಕೆ. ತನ್ನೆÇÉಾ ಆಸೆ, ಕನಸುಗಳನ್ನು ಮಗಳಿಗಾಗಿ ಮೀಸಲಿಟ್ಟಿದ್ದರು. ಬೇರೊಂದು ಮದುವೆಯಾದರೆ, ಬಂದ ಗಂಡಸು ಹೇಗಿರುತ್ತಾನೋ ಎಂಬ ಭಯ. ಜತೆಗೆ, ಮಗಳು ಪ್ರಾಯಕ್ಕೆ ಬರುತ್ತಿರುವಾಗ ತನಗ್ಯಾಕೆ ಮದುವೆ ಎಂದು ತನ್ನೆಲ್ಲ ಆಸೆಗಳನ್ನು ಬದಿಗೊತ್ತಿ ಸುಮ್ಮನಾಗಿದ್ದರು. ಮಗಳಿಗೆ ಮದುವೆ ಮಾಡಿಸಿ ಗಂಡನ ಜತೆ ಕಳುಹಿಸಿದ್ದರು. ಮಗಳ ಜತೆ ಹೋದರೆ ತನ್ನಿಂದ ಅವರಿಗೆ ತೊಂದರೆ ಆಗುತ್ತದೆ ಎಂದು ಒಂಟಿಯಾಗಿಯೇ ಜೀವನ ಸಾಗಿಸಿದರು.

ಇವೆರಡೂ ಉದಾಹರಣೆ ಅಷ್ಟೇ. ಇಂಥದ್ದೇ ನೂರಾರು ಮಂದಿ ನಮ್ಮ ಪರಿಚಯದಲ್ಲಿ, ನೆರೆಹೊರೆಯಲ್ಲಿ ಇರುತ್ತಾರೆ. ಯಾವುದೋ ಕಾರಣಕ್ಕೆ ಗಂಡನಿಂದ ಬೇರೆಯಾದವರು, ಹೆಂಡತಿಯಿಂದ ದೂರವಾದವರು ಅಥವಾ ಸಂಗಾತಿಯ ಅಕಾಲಿಕ ಮರಣದಿಂದ ದಿಕ್ಕು ಕಾಣದೇ ಇದ್ದವರು ನಮ್ಮ ನಡುವೆಯೇ ಇರುತ್ತಾರೆ. ಗಂಡನ ಹಿಂಸೆಯಿಂದ ಬೇಸತ್ತವರು ಅಥವಾ ಹೆಂಡತಿಯಿಂದ ಮಾನಸಿಕ ನೋವು ತಿಂದವರು, ನನಗಿನ್ನು ಜನ್ಮದಲ್ಲಿ ಸಂಗಾತಿಯ ಸಾಂಗತ್ಯ ಬೇಡವೆಂದು ಹೇಳಿ ಸುಮ್ಮನಾಗುತ್ತಾರೆ. ಆದರೆ, ಇದೆಲ್ಲಾ ಎಷ್ಟು ದಿನ ಸಾಧ್ಯ? ಒಂದು ಗಂಡಿಗೊಂದು ಹೆಣ್ಣು ಬೇಕೆ ಬೇಕು ಅಲ್ಲವೇ? ಕಷ್ಟವೋ, ಸುಖವೋ ಜೀವನದ ಬಂಡಿ ಇಬ್ಬರೂ ಹೆಗಲು ಕೊಟ್ಟರೆ ಮಾತ್ರ ಸುಸೂತ್ರವಾಗಿ ನಡೆಯಲು ಸಾಧ್ಯ? ಏಕಾಂಗಿ ಪಯಣ ಎಲ್ಲಿಯ ತನಕ ಸಾಗಬಹುದು? 

Advertisement

ಸಾಮಾನ್ಯವಾಗಿ ಹೆಣ್ಣುಮಕ್ಕಳು ವಿಚ್ಛೇದನ ಪಡೆದ ನಂತರವೋ ಅಥವಾ ಗಂಡನ ಅಕಾಲಿಕ ಮರಣದಿಂದಲೋ ಒಂಟಿಯಾಗಿತ್ತಾರೆ. ಅವರಲ್ಲಿ ಮಕ್ಕಳಿದ್ದವರು, ನಮಗೆ ಮತ್ತೂಮ್ಮೆ ಈ ಮದುವೆ, ಗಂಡನ ಉಸಾಬರಿ ಬೇಡವೆಂದು ಮಕ್ಕಳಿಗಾಗಿಯೇ ತಮ್ಮ ಜೀವನ ಮುಡಿಪಾಗಿಡುತ್ತಾರೆ. ಪುನಃ ಮದುವೆಗೆ ಕೊರಳೊಡ್ಡಿದರೆ ಸರಿಯಾದ ಸಂಗಾತಿ ಸಿಗುತ್ತಾನಾ ಎಂಬ ಆತಂಕವೂ ಕಾಡುತ್ತಿರುತ್ತದೆ. ಗೆಳತಿಯರು  ಅವರವರ ಗಂಡ-ಮಕ್ಕಳ ಜತೆ ನಗುತ್ತ ಸುಖವಾಗಿರುವಾಗ ನಾನ್ಯಾರ ಬಳಿ ನೋವು ಹೇಳಿಕೊಳ್ಳುವುದು? ದುಃಖವಾದಾಗ ಯಾರ ಹೆಗಲೊರಗುವುದು ಎಂಬ ಚಿಂತೆ ಕಾಡುತ್ತದೆ. ಮನೆಯವರ ಬಳಿಯೂ ಈ ವಿಷಯದ ಕುರಿತು ಮಾತನಾಡುವುದಕ್ಕೆ ಆಗದೆ ಒಳಗೊಳಗೇ ಪರಿತಪಿಸುತ್ತಿರುತ್ತಾರೆ.

ಹಾಗಂತ, ಗಂಡಿಗೆ ಈ ಚಿಂತೆ ಇಲ್ಲವೆಂದು ತಿಳಿದುಕೊಳ್ಳಬೇಡಿ. ಹೆಣ್ಣು ತನ್ನ ಭಾವನೆಗಳನ್ನು ಕಣ್ಣೀರಿನ ಮೂಲಕವಾದರೂ ವ್ಯಕ್ತಪಡಿಸಬಹುದು ಆದರೆ ಗಂಡು ಈ ವಿಷಯದಲ್ಲೂ ಅಸಹಾಯಕ. ಹೆಂಡತಿಯಿಲ್ಲದ ಗಂಡು ಕೂಡ ಅಂತರಂಗದಲ್ಲಿ ನೋವಿನ ಮೂಟೆಯನ್ನೇ ಹೊತ್ತುಕೊಂಡಿರುತ್ತಾನೆ. ಹೆಂಡತಿ ಬಿಟ್ಟು ಹೋಗಿದ್ದರೆ ಇವನ ಜತೆ ಬಾಳುವುದಕ್ಕೆ ಆಗದೇ ಬಿಟ್ಟು ಹೋಗಿ¨ªಾಳೆ ಎಂದು ಕೆಲವರು ಮೂದಲಿಸಿದರೆ, ಇನ್ನು ಕೆಲವರು ಇವನಿಗೆ ಇನ್ಯಾವುದೋ ಸಂಬಂಧವಿರಬೇಕು ಎಂದೆಲ್ಲಾ ಮಾತಾಡುತ್ತಾರೆ. ಆದರೆ, ಮನೆಗೆ ಬಂದಾಗ ಒಂದು ಲೋಟ ನೀರು ಕೊಡುವುದಕ್ಕೂ ತನ್ನವರಾರೂ ಇಲ್ಲದೇ ಇ¨ªಾಗ ಆ ಗಂಡಸು ಅನುಭವಿಸುವ ನೋವು ಯಾರಿಗೂ ಕಾಣಿಸುವುದೇ ಇಲ್ಲ. ನೋಡುವವರಿಗೆಲ್ಲ ಅವನು ಸುಖಪುರುಷನಂತೆ ಕಾಣಬಹುದು. 

ವಯಸ್ಸಿರುವಾಗ ತನಗೆ ಗಂಡನ ಅಗತ್ಯವಿಲ್ಲವೆಂದು ಹೆಣ್ಣು, ತನಗೆ ಹೆಣ್ಣಿನ ಅವಶ್ಯಕತೆ ಇಲ್ಲವೆಂದು ಗಂಡು ಹೇಳಬಹುದು. ಆದರೆ, ಬದುಕು ಸೋತಾಗ, ಆರೋಗ್ಯ ಕೆಟ್ಟಾಗ, ನೋವು, ನಲಿವು ಕೇಳಿಸಿಕೊಳ್ಳುವ ಒಂದು ಜೀವ ಬೇಕು. ತನ್ನದೇ ಒಂದು ಕುಟುಂಬ ಬೇಕು ಎಂದು ಅನಿಸುತ್ತದೆ. ಸಂಗಾತಿಯ ಸಾಂಗತ್ಯವಿಲ್ಲದ ಬದುಕು ಒಮ್ಮೊಮ್ಮೆ ಜಿಗುಪ್ಸೆ ಮೂಡಿಸುತ್ತದೆ. ಹೆಂಡತಿಯ ಸಾಂಗತ್ಯ ಇಲ್ಲದ ಗಂಡನ ಬದುಕು ಹೇಗೆ ಅಪೂರ್ಣವೋ, ಗಂಡನಿಲ್ಲದ ಹೆಂಡತಿಯ ಬದುಕು ಕೂಡ ಅಷ್ಟೇ ಅಪೂರ್ಣ. ದೈಹಿಕ ವಾಂಛೆಗಾಗಿ ಮಾತ್ರ ಹೆಣ್ಣಿಗೊಂದು ಗಂಡು, ಗಂಡಿಗೊಂದು ಹೆಣ್ಣು ಆವಶ್ಯವಿರುವುದು ಅಲ್ಲ. ಇವೆಲ್ಲದಕ್ಕೂ ಮಿಗಿಲಾಗಿ ಬಾಳಸಂಗಾತಿಯ ಅಗತ್ಯವಿರುತ್ತದೆ. 

ಈ ಸರಳ ಸತ್ಯವನ್ನು ಗಂಡು-ಹೆಣ್ಣು ಅರ್ಥ ಮಾಡಿಕೊಳ್ಳಬೇಕು. ತಂದೆ-ತಾಯಿ, ಅಕ್ಕ-ತಮ್ಮ ಯಾರೂ ನಮ್ಮ ಮುಪ್ಪಿನ ಕಾಲದಲ್ಲಿ ಬರುವುದಿಲ್ಲ. ಕಟ್ಟಿಕೊಂಡವನೋ, ಕೈಹಿಡಿದವಳ್ಳೋ ಮಾತ್ರ ನಮ್ಮದೆಯ ನೋವಿಗೆ ದನಿಯಾಗುತ್ತಾರೆ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು.

 ಪವಿತ್ರಾ ರಾಘವೇಂದ್ರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next