Advertisement

ತಾಲಿಬಾನ್‌ ಜತೆ ಮಾತುಕತೆ ಇಲ್ಲ

08:30 AM Nov 10, 2018 | Team Udayavani |

ಹೊಸದಿಲ್ಲಿ/ಮಾಸ್ಕೋ: ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ತಾಲಿಬಾನ್‌ ಉಗ್ರ ಸಂಘಟನೆ ಜತೆಗೆ ಮಾತುಕತೆ ನಡೆಸುವ ಇರಾದೆಯನ್ನೇ ಹೊಂದಿಲ್ಲ ಎಂದಿದೆ ಕೇಂದ್ರ ಸರಕಾರ‌. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಸಭೆಯ ಬೆನ್ನಲ್ಲೇ ಹೊಸದಿಲ್ಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ಕುಮಾರ್‌, ಭಾರತ ಸರಕಾರ ಈ ಮಾತುಕತೆಯಲ್ಲಿ ಅಧಿಕೃತವಾಗಿ ಪಾಲ್ಗೊಂಡಿಲ್ಲ. ಕೇವಲ ಅನೌಪಚಾರಿಕ ನೆಲೆಯಲ್ಲಿ ಭಾಗವಹಿಸಿದೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ನಡೆಯುವ ಯಾವುದೇ ರೀತಿಯ ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಭಾಗಿಯಾಗುತ್ತದೆ. ಆ ದೇಶಕ್ಕೆ ಸಂಬಂಧಿಸಿದ ನೀತಿ ನಿರ್ಣಯ ಸಭೆಗಳಲ್ಲಿ ಭಾರತ ಮುಖ್ಯ ಭೂಮಿಕೆ ವಹಿಸಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಭಾರತದ ಪರವಾಗಿ ಮಾಜಿ ರಾಯಭಾರಿಗಳಾದ ಅಮರ್‌ ಸಿನ್ಹಾ ಮತ್ತು ಟಿ.ಸಿ.ಎ.ರಾಘವನ್‌ ಭಾಗವಹಿಸಿದ್ದರು.

Advertisement

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಕಣಿವೆ ರಾಜ್ಯದ ಪ್ರತ್ಯೇಕತಾವಾದಿಗಳ ಜತೆಗೆ ಮಾತುಕತೆ ನಡೆಸದ ಕೇಂದ್ರ ತಾಲಿಬಾನ್‌ ಜತೆಗೆ ಮಾತುಕತೆ ನಡೆಸುತ್ತಿದೆ ಎಂದು ಟೀಕಿಸಿದ್ದರು. ಇದೇ ವೇಳೆ ಮಾಸ್ಕೋದಲ್ಲಿ ನಡೆದ ಸಭೆಯಲ್ಲಿ ಅಫ್ಘಾನಿಸ್ಥಾನದಲ್ಲಿ ಯಾವ ರಾಷ್ಟ್ರವೂ ಕೂಡ ಹೆಚ್ಚುಗಾರಿಕೆ ಪ್ರದರ್ಶಿಸಬಾರದು ಎಂದು ರಷ್ಯಾ ಪ್ರತಿಪಾದಿಸಿದೆ. ಉಗ್ರ ಸಂಘಟನೆ ಜತೆಗೆ ನೇರ ಶಾಂತಿ ಮಾತುಕತೆ ನಡೆಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ರಷ್ಯಾ ವಿದೇಶಾಂಗ ಸಚಿವ ಸಗೇì ಲಾರ್ವೋ ಈ ಪ್ರಸ್ತಾಪ ಮಂಡಿಸಿದ್ದಾರೆ. ಇಂಥ ಸಭೆಯ ಬಗ್ಗೆ ಸೆ.4ರಂದು ಪ್ರಸ್ತಾಪ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next