Advertisement

ದ.ಕ.: ಕೋವಿಡ್‌ ಪರೀಕ್ಷೆಗೆ ಏಕರೂಪ ದರವಿಲ್ಲ 

10:06 PM May 06, 2021 | Team Udayavani |

ಮಹಾನಗರ: ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ಆಸ್ಪತ್ರೆಗಳಲ್ಲಿ ಏಕರೂಪ ದರವನ್ನು ಕೇಂದ್ರ ಸರಕಾರ ನಿಗದಿಪಡಿಸಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

Advertisement

ಜಿಲ್ಲೆಯಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಏರುತ್ತಿದ್ದು, ಮುಂಜಾಗ್ರತೆಯಾಗಿ ಪರೀಕ್ಷೆ ಮಾಡಿ ಸುವವರ ಸಂಖ್ಯೆಯೂ ಹೆಚ್ಚಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಉಚಿತ ವಾಗಿದ್ದರೂ ಫ‌ಲಿತಾಂಶ ತಡವಾಗುತ್ತಿದೆ ಎಂಬ ಕಾರಣಕ್ಕೆ ಅನೇಕರು ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಇಲ್ಲಿ ಎಷ್ಟು  ದರ ಪಾವತಿಸಬೇಕೆಂಬ ಮಾಹಿತಿಯೂ ಇಲ್ಲ ಎಂಬುದು ಹಲವರ ಅಭಿಪ್ರಾಯ.

ಆರ್‌ಟಿಪಿಸಿಆರ್‌ ಪರೀಕ್ಷೆಗೆ 800 ರೂ. ನಿಗದಿ ಪಡಿಸಲಾಗಿದ್ದು, ಕೆಲವೆಡೆ  ಬಿಲ್‌ನಲ್ಲಿ 800 ರೂ. ಎಂದು ನಮೂದಿಸಿ, ಪ್ರತೀ ಪರೀಕ್ಷೆಗೂ 2ರಿಂದ 3 ಸಾವಿರ ರೂ. ವರೆಗೆ ಪಡೆಯುತ್ತಿವೆ ಎಂಬ ದೂರುಗಳಿವೆ. ಹೆಚ್ಚುವರಿ ವಸೂಲಿಗೆ ಕಾರಣ ಕೇಳಿದರೆ, ಗಂಟಲ ದ್ರವದ ಮಾದರಿಯನ್ನು ಮಂಗಳೂರಿಗೆ ಕಳುಹಿಸಲು ಖರ್ಚು-ವೆಚ್ಚವಿರು ವುದರಿಂದ ಹೆಚ್ಚುವರಿ ಹಣ ನೀಡಬೇಕು ಎನ್ನುತ್ತಿದ್ದಾರೆ ಎಂಬ ಆರೋಪವಿದೆ.

ಪ್ರತೀ ದಿನ 5ರಿಂದ 6 ಸಾವಿರ ಪರೀಕ್ಷೆ :

ಸರಕಾರಿ ವಲಯದಲ್ಲಿ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆಯ ಜತೆಗೆ ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಲ್ಲಿ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗುತ್ತದೆ. ಜಿಲ್ಲೆಯ 10  ಪ್ರಯೋಗಾಲಯದಲ್ಲಿ ಈ ಪರೀಕ್ಷೆ ನಡೆಸಲಾ ಗುತ್ತದೆ. ಪ್ರತೀ ದಿನ ಸರಾಸರಿ 5ರಿಂದ 6 ಸಾವಿರ ತಪಾಸಣೆ ನಡೆಸಲಾಗುತ್ತಿದೆ. ಕೆಲವು ದಿನಗಳಿಂ ದೀಚೆಗೆ ತಪಾಸಣೆ ಚುರುಕಾಗಿದ್ದು, ಸರಕಾರಿ ವಲ ಯದಲ್ಲಿ ಪರೀಕ್ಷೆಯ ಫ‌ಲಿತಾಂಶ ಬರಲು 3-4 ದಿನ ಬೇಕು. ವೆನಾÉಕ್‌ ಆಸ್ಪತ್ರೆಯಲ್ಲಿ ಒತ್ತಡದ ಪರಿಣಾಮ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಸರಕಾರಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿರುವುದು ವಿಳಂಬಕ್ಕೆ ಕಾರಣ. ಖಾಸಗಿ ಆಸ್ಪತ್ರೆಗಳಲ್ಲಾದರೆ ತ್ವರಿತವಾಗಿ ಫ‌ಲಿತಾಂಶ ಲಭಿಸುತ್ತದೆ.

Advertisement

ಹೆಚ್ಚು ದರ ವಿಧಿಸಿದರೆ ಹೀಗೆ ಮಾಡಿ :

ಆರ್‌ಟಿಪಿಸಿಆರ್‌ ಪರೀಕ್ಷೆಗೆ ಕೇಂದ್ರ ಸರಕಾರ ದರ (800 ರೂ.) ನಿಗದಿಪಡಿಸಿದೆ. ಯಾರೂ ಅದಕ್ಕಿಂತ ಹೆಚ್ಚಿನ ದರ ವಸೂಲಿ ಮಾಡು ವಂತಿಲ್ಲ. ವಸೂಲಿ ಮಾಡಿದರೆ ಸಂತ್ರಸ್ತರು ಸೂಕ್ತ ದಾಖಲೆಗಳೊಂದಿಗೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸ ಬಹುದು. ಅದನ್ನು ಪರಿಶೀಲಿಸಿ ದೋಷ ಪೂರಿತವಾಗಿದ್ದರೆ  ಕಠಿನ ಕ್ರಮ ಕೈಗೊಳ್ಳಲಿದೆ. ಕೊರೊನಾ ಮೊದಲ ಅಲೆಯ ಸಂದರ್ಭ ದಲ್ಲೂ ಕೆಲವು ದೂರು ಬಂದಿದ್ದವು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಕೇಂದ್ರ ಸರಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಮೊತ್ತ ಪಡೆಯಲು ಅವಕಾಶ ಇಲ್ಲ. ದುಪ್ಪಟ್ಟು ದರ ವಿಧಿಸುತ್ತಿರುವುದು ಸಾರ್ವಜನಿಕರ ಗಮನಕ್ಕೆಬಂದರೆ ಸೂಕ್ತ ದಾಖಲೆ ನೀಡಿ ಆರೋಗ್ಯ ಇಲಾಖೆ, ಜಿಲ್ಲಾಡಳಿತಕ್ಕೆ ದೂರು ನೀಡಿದರೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು.  -ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next