Advertisement

ಗಂಡಸ್ತನದ ಹೇಳಿಕೆ; ಕುಮಾರಸ್ವಾಮಿಗೆ ಉತ್ತರ ಕೊಡುವ ಪ್ರಶ್ನೆಯೇ ಇಲ್ಲ: ಸಿಎಂ

03:36 PM Mar 31, 2022 | Team Udayavani |

ಬೆಂಗಳೂರು : ತಮ್ಮ ವಿರುದ್ಧ ಕುಮಾರಸ್ವಾಮಿ ನೀಡಿರುವ ಗಂಡಸ್ತನದ ಹೇಳಿಕೆ ವಿಚಾರಕ್ಕೆ  ಉತ್ತರ ಕೊಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿರುವ ರೀತಿ ಇಲ್ಲಿ ಗಂಡಸ್ತನದ ಪ್ರಶ್ನೆ ಬರುವುದಿಲ್ಲ. ಅವರು ಹೇಳಿದ್ದಕ್ಕೆಲ್ಲ ನಾವು ಉತ್ತರ ಕೊಡಲು ಸಾಧ್ಯವಿಲ್ಲ ಎಂದರು.

ನಾವು ಹಿಜಾಬ್ ವಿಚಾರ ಬಂದಾಗ ಹೇಗೆ ಸಮರ್ಥವಾಗಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ ಎಂದು ಜನ ನೋಡಿದ್ದಾರೆ.ಹಲಾಲ್ ಕಟ್ ವಿಚಾರದಲ್ಲೂ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ. ಎಲ್ಲವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕೆಂದು ಕುಮಾರಸ್ವಾಮಿಗೆ ಗೊತ್ತಿದೆ: ಈಶ್ವರಪ್ಪ ಟಾಂಗ್

ನಾಳೆ ನಡೆದಾಡುವ ದೇವರೆಂದೆ ಪ್ರಸಿದ್ಧರಾಗಿದ್ದ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತೋತ್ಸವ ನೆರವೇರಲಿದೆ.ಅವರ ಬದುಕಿನಿಂದ ನಮಗೆ ಸಿಕ್ಕಿರುವ ಪ್ರೇರಣೆಯೇ ಈ ಆಚರಣೆ.ಅವರ ಜನ್ಮದಿನಾಚಾರಣೆಯನ್ನ ಅರ್ಥಪೂರ್ಣವಾಗಿ ನೆರವೇರಬೇಕು.ಹೀಗಾಗಿ ಮಠದಲ್ಲಿ ತಯಾರಿಯನ್ನ ನಾನು ವೀಕ್ಷಿಸಿದ್ದೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next