Advertisement

Politics: ರಾಜಕಾರಣದಲ್ಲಿ ಮೌಲ್ಯಕ್ಕಿಲ್ಲ ಬೆಲೆ: ರಾಯರಡ್ಡಿ

08:46 PM Oct 21, 2023 | Team Udayavani |

ಕೊಪ್ಪಳ: ರಾಜಕಾರಣದಲ್ಲಿ ಮೌಲ್ಯಗಳಿಗೆ ಬೆಲೆ ಇಲ್ಲದಂತಹ ಕಾಲ ಇದಾಗಿದೆ. ಈ ವ್ಯವಸ್ಥೆಯು ನಿಜಕ್ಕೂ ಬೇಸರ ತರಿಸಿದೆ ಎಂದು ಶಾಸಕ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡಿದವರನ್ನು ಜನತೆ ಎಂದೂ ಮರೆಯುವುದಿಲ್ಲ.

Advertisement

ಕೇಂದ್ರದಲ್ಲಿ ವಾಜಪೇಯಿ, ಐ.ಕೆ.ಗುಜ್ರಾಲ್‌, ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗ ವ್ಯವಸ್ಥೆ ಸರಿಯಿಲ್ಲ. ಜನತೆ ಸಹ ಬುದ್ಧಿವಂತರಾಗಿ ಯಾರನ್ನು ಎಲ್ಲಿ ಇಡಬೇಕು. ಅಲ್ಲಿ ಇಟ್ಟಿದ್ದಾರೆ. ಇಂದು ರಾಜಕಾರಣ ಎಂದರೆ ಜಾತಿ, ದ್ವೇಷ, ಹಣದ ಮೇಲೆ ಅ ಧಿಕಾರ ನಡೆದಿದೆ. ಅಭಿವೃದ್ಧಿಯಲ್ಲಿ ಜಾತಿ, ಹಣದ ರಾಜಕಾರಣ ಮಾಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next