ಅಮರಾವತಿ: ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ತೆಲುಗು ದೇಶಂ ಪಕ್ಷ(ಟಿಡಿಪಿ)ದ ನಾಯಕ ನರಮಲ್ಲಿ ಶಿವಪ್ರಸಾದ್(68) ಅವರು ಚೆನ್ನೈನಲ್ಲಿ ಶನಿವಾರ ನಿಧನರಾಗಿದ್ದಾರೆ. ದೇಶಕ್ಕೆ ಸಂಬಂಧಿಸಿದ ಅನೇಕ ವಿಚಾರಗಳ ಕುರಿತು ಸರ್ಕಾರದ ಗಮನ ಸೆಳೆಯಲೆಂದು ಸಂಸತ್ ಅಧಿವೇಶನಕ್ಕೆ ವಿಭಿನ್ನ ವೇಷಗಳನ್ನು ಧರಿಸಿ ಆಗಮಿಸುತ್ತಿದ್ದ ಶಿವಪ್ರಸಾದ್ ಅವರು, ತಮ್ಮ ವಿನೂತನ ಶೈಲಿಯ ಪ್ರತಿಭಟನೆಗಳಿಂದಲೇ ಮನೆ ಮಾತಾಗಿದ್ದರು. ಚಿತ್ತೂರು ಕ್ಷೇತ್ರದಿಂದ 2 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು, ಅವಿಭಜಿತ ಆಂಧ್ರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಶನಿವಾರ ಬೆಳಗ್ಗೆ ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆ ಳೆದಿದ್ದಾರೆ. ಶ್ರೀಕೃಷ್ಣ, ಶ್ರೀರಾಮ, ಅಡಾಲ್ಫ್ ಹಿಟ್ಲರ್, ಛತ್ರಪತಿ ಶಿವಾಜಿ ಮಹರಾಜ್, ಎಂ.ಜಿ.ರಾಮಚಂದ್ರನ್, ರೈತ, ಮುಸ್ಲಿಂ ಧರ್ಮಗುರು ಹೀಗೆ ನಾನಾ ವೇಷಗಳಲ್ಲಿ ಅವರು ಸಂಸತ್ನಲ್ಲಿ ಪ್ರತ್ಯಕ್ಷರಾಗಿದ್ದರು.