Advertisement

ಸಭೆ ನಿರ್ಣಯ ಅನುಷ್ಠಾನವಿಲ್ಲ; ಅಸಮಾಧಾನ

11:06 PM Jul 12, 2019 | mahesh |

ಬೆಳ್ತಂಗಡಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಭೆಗಳು ಕಾಟಾಚಾರಕ್ಕೆ ನಡೆಸುವಂತಾಗಿದೆ. ಸಭೆಯಲ್ಲಿ ಅಂಗೀಕರಿಸಿದ ನಿರ್ಣಯ ಗಳು ಹಲವಾರು ವರ್ಷಗಳಿಂದ ಅನುಷ್ಠಾನವಾಗದೆ ಬಾಕಿ ಇರುವ ಕುರಿತು ದಲಿತ ಮುಖಂಡರು ಪ.ಜಾತಿ/ ಪ. ಪಂಗಡ ಹಿತರಕ್ಷಣ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಮಿನಿ ವಿಧಾನಸೌಧದಲ್ಲಿ ಗುರುವಾರ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಅಧ್ಯಕ್ಷತೆ ಯಲ್ಲಿ ನಡೆದ ಪ. ಜಾತಿ-ಪ. ಪಂಗಡ ಹಿತರಕ್ಷಣ ಸಭೆಯಲ್ಲಿ ದಲಿತ ಮುಖಂ ಡರು ಸಮಸ್ಯೆಗಳನ್ನು ತಿಳಿಸಿದರು.

ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿ ದಶಕವೇ ಕಳೆದಿದ್ದರೂ ಯಾರಿಗೂ ಪ್ರಯೋಜನವಾಗಿಲ್ಲ ಎಂದು ಮುಖಂಡ ರೊಬ್ಬರು ಗಮನಸೆಳೆದರು. ಕಾಯ್ದೆ ಯಡಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲದೆ ಅರಣ್ಯದಲ್ಲಿ ವಾಸಿಸುತ್ತಿರುವ ಮೂಲನಿವಾಸಿಗಳಿಗೆ ಸಮಸ್ಯೆಯಾಗಿದೆ ಎಂದರು. ಜಿಲ್ಲೆಯಲ್ಲಿ ಈವರೆಗೆ ಕೇವಲ 10 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಿರುವ ಹೊರತು ಬೇರಾವುದೇ ಕೆಲಸವಾಗಿಲ್ಲ. ಮೂರು ವರ್ಷಗಳ ಹಿಂದೆ ಹಿತ್ತಿಪೇಲೆ ಎಂಬಲ್ಲಿ ರಸ್ತೆಗೆ 25 ಲಕ್ಷ ರೂ. ಅನುದಾನ ನೀಡಿದ್ದರೂ ಕಾನೂನು ತೊಡಕಿನಿಂದಾಗಿ ಅದು ಸಾಧ್ಯವಾಗಿಲ್ಲ. ಅದಕ್ಕೆ ಅರ್ಜಿ ಸಲ್ಲಿಸಿ ಮೂರು ವರ್ಷಗಳಾಗಿದ್ದರೂ ಸೂಕ್ತ ಉತ್ತರ ಸಿಗುತ್ತಿಲ್ಲ. ಬಡವರಿಗೆ ಬದುಕಲು ಅವಕಾಶ ಕಲ್ಪಿಸಿ ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಭೋವಿ ಜನಾಂಗ ದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿರುವು ದರಿಂದಾಗಿ ಸ್ಥಳೀಯರಿಗೆ ಅನ್ಯಾಯ ವಾಗು ತ್ತಿದೆ ಎಂದು ದಲಿತ ಮುಖಂಡ ಸಂಜೀವ ಆರ್‌. ಆರೋಪಿಸಿ ದರು. ಪ್ರತಿಕ್ರಿಯಿಸಿದ ತಹಶೀಲ್ದಾರ್‌, ಈಗಾಗಲೇ ಭೋವಿ ಜನಾಂಗಕ್ಕೆ ಹಾಗೂ ಚೆನ್ನದಾಸ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಲಾಗಿದೆ. ನೀಡಿರುವ ಪ್ರಮಾಣಪತ್ರಗಳ ಕುರಿತು ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ಪಟ್ಟಾ ಜಾಗದಲ್ಲಿ ಇಲಾಖೆ ಮರ
ನಾವೂರಿನಲ್ಲಿ ದಲಿತರಿಗೆ ಸೇರಿದ ಪಟ್ಟಾ ಜಾಗದಲ್ಲಿ ಅರಣ್ಯ ಇಲಾಖೆ ಗಿಡ ನೆಟ್ಟಿದೆ. ಅಧಿಕಾರಿಗಳು ಮರ ತೆರವಿಗೆ ನೇಮಿರಾಜ ಕಿಲ್ಲೂರು ಆಗ್ರ ಹಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆಯವರು, ಅರಣ್ಯ ಇಲಾಖೆಯ ಜಾಗದಲ್ಲಿ ಮಾತ್ರ ಗಿಡ ನಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಉತ್ತರಿಸಿದ ತಹಶೀಲ್ದಾರರು, ಸ್ಥಳ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Advertisement

ಅಳದಂಗಡಿಯಲ್ಲಿ ಇತ್ತೆಂದು ಹೇಳಲಾದ ಅಂಬೇಡ್ಕರ್‌ ಭವನವನ್ನು ಕೆಡವಿ ಕಟ್ಟಡ ಕಟ್ಟುತ್ತಿದ್ದಾರೆ ಎಂದು ಶೇಖರ ಲಾೖಲ ಆರೋಪಿಸಿದರು. ಈ ಬಗ್ಗೆ ಪರಿಶೀಲಿಸಿ
ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದರು.

ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿ ಕಾರಿ ಕೆ.ಇ. ಜಯರಾಂ, ತಾ| ಸಮಾಜ ಕಲ್ಯಾಣಾಧಿಕಾರಿ ಎಚ್‌.ಎಂ. ಪಾಟೀಲ್‌, ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯ ಓಬಯ್ಯ ಉಪಸ್ಥಿತರಿದ್ದರು.

ಪ್ರಮುಖ ಸಮಸ್ಯೆಗಳ ಚರ್ಚೆ
ಮುಂಡಾಜೆ-ಧರ್ಮಸ್ಥಳ ರಸ್ತೆ ತೆಪ್ಪದಗಂಡಿ ಸಮೀಪ ರಸ್ತೆ ದುರಸ್ತಿಗೆ ಆಗ್ರಹ
ದಲಿತ ಸಮುದಾಯದ ಮೇಲಿನ ದೌರ್ಜನ್ಯ ವಿರುದ್ಧ
ಖಂಡನ ನಿರ್ಣಯಕ್ಕೆ ಆಗ್ರಹ
ಮೆಸ್ಕಾಂ ನೂತನ ವಿದ್ಯುತ್‌ ಮೀಟರ್‌ನಿಂದ
ದುಪ್ಪಟ್ಟು ಬಿಲ್‌: ಕ್ರಮಕ್ಕೆ ಸೂಚನೆ
ಮಾದಕ ಜಾಲ ಹತ್ತಿಕ್ಕಲು ಮುಖಂಡರ ಆಗ್ರಹ
ಉಜಿರೆಯಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಕೂಗು
ಶಿಶಿಲ, ಶಿರ್ಲಾಲು ಸಹಿತ ಶಿಲಾನ್ಯಾಸಗೊಂಡ ಅಂಬೇಡ್ಕರ್‌ ಭವನ
ಕಾಮಗಾರಿ ಆರಂಭಿಸುವಂತೆ ಆಗ್ರಹ
ಶಿರ್ಲಾಲು- ಶಾಂತಿಗುಡ್ಡೆಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ

ಕಲಾ ವಿಭಾಗಕ್ಕೆ ಮಾತ್ರ ಪ್ರವೇಶ
ವೇಣೂರಿನ ಸರಕಾರಿ ಕಾಲೇಜಿನಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಕಲಾ ವಿಭಾಗದಲ್ಲಿ ಮಾತ್ರ ಪ್ರವೇಶ ನೀಡಲಾಗುತ್ತಿದೆ.ಇದರಿಂದಾಗಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ದಲಿತ ಮುಖಂಡರು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಇದೇ ವಿಚಾರ ನನ್ನ ಗಮನಕ್ಕೂ ಬಂದಿದ್ದು, ಒತ್ತಾಯ ಪೂರ್ವಕವಾಗಿ ಕಲಾ
ವಿಭಾಗಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಈ ವಿಚಾರದ
ಬಗ್ಗೆ ಕೂಡಲೇ ಗಮನಹರಿಸುತ್ತೇನೆ. ಅಧಿಕಾರಿಗಳು ವೇಣೂರು ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸುವರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next