Advertisement

ಸಂತೋಷ್‌ ವಿರುದ್ಧದ ಆರೋಪಕ್ಕೆ ಅರ್ಥವೇ ಇಲ್ಲ 

11:42 AM May 02, 2017 | Team Udayavani |

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅವರ ವಿರುದ್ಧದ ಆರೋಪಗಳಿಗೆ ಅರ್ಥವೇ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ವರ್ಷಗಳ ಹಿಂದೆ
ಇಂಜಿನಿಯರಿಂಗ್‌ ಪದವಿ ಪಡೆದ ಸಂತೋಷ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರದ್ದು ನಿಸ್ವಾರ್ಥ ಜೀವನ. ಅವರಿಗೆ ಯಾವುದೇ ರೀತಿಯ ಆಸೆ, ಆಕಾಂಕ್ಷೆಗಳಿಲ್ಲ. ಅವರಿಗಿರುವ
ಆಸೆ ಎಂದರೆ ಅದು ರಾಷ್ಟ್ರ ಶಕ್ತಿಶಾಲಿಯಾಗಬೇಕು ಎನ್ನುವುದು ಮಾತ್ರ ಎಂದರು.

Advertisement

ಇಂತಹ ಪ್ರಚಾರಕರಿಂದಾಗಿಯೇ ಬಿಜೆಪಿ ಇಂದು ಸದೃಢವಾಗಿ ಬೆಳೆದಿದೆ. ದೀನ್‌ ದಯಾಳ್‌ ಉಪಾಧ್ಯಾಯ, ಎಲ್‌.ಕೆ. ಅಡ್ವಾಣಿ ಅವರೂ ಸಹ ಆರ್‌ ಎಸ್‌ಎಸ್‌ ಪ್ರಚಾರಕರಾಗಿದ್ದವರು. ಪಕ್ಷಕ್ಕೆ ಇಂತಹವರ ಕೊಡುಗೆ ಅಪಾರವಾದುದು ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ. ವೈಯಕ್ತಿಕವಾಗಿ ತೀರ್ಮಾನ
ಮಾಡಲು ಸಾಧ್ಯವಿಲ್ಲ. ಸಂತೋಷ್‌ ಅವರು ಪಕ್ಷ ಹಾಗೂ ರಾಷ್ಟ್ರಕ್ಕಾಗಿ ನಿಷ್ಠುರವಾಗಿ ಮಾತನಾಡುತ್ತಾರೆ.

ತಮ್ಮ ಬಳಿಯೂ ಹಲವಾರು ಬಾರಿ ನಿಷ್ಠುರವಾಗಿ ಮಾತನಾಡಿದ್ದಾರೆ. ಇಂತಹವರ ಮೇಲೆ ಮಾಡುವ ಆರೋಪಗಳಿಗೆ ಅರ್ಥವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next