Advertisement

ಪಕ್ಷದ ಅಧಿಕಾರದಲ್ಲಿ ಹಸ್ತಕ್ಷೇಪ ಇಲ್ಲ : ಸಂಸದ ಬಿ ವೈ ರಾಘವೇಂದ್ರ

12:44 PM Sep 17, 2019 | Team Udayavani |

ಶಿವಮೊಗ್ಗ : ಸಿಎಂ ಯಡಿಯೂರಪ್ಪನವರ ಪುತ್ರನಾದರೂ ನಾನೊಬ್ಬ ಜನಪ್ರತಿನಿಧಿ ಹಾಗೆಯೇ ವಿಜಯೇಂದ್ರ ಬಿಜೆಪಿ ಕಾರ್ಯಕರ್ತನಾಗಿದ್ದರಿಂದ ಸಹಜವಾಗಿಯೇ ಜನರು ಕೆಲಸ ಅಪೇಕ್ಷಿಸಿ ಬರುತ್ತಾರೆ.  ನಾವು ಕಾರ್ಯಕರ್ತರಾಗಿ ಕೆಲಸ ಮಾಡುತ್ತೇವೆ , ಹೊರತುಪಡಿಸಿ ಅಧಿಕಾರದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ  ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಬಿ ಎಸ್ ಯಡಿಯೂರಪ್ಪ ಆಸ್ತಿ ದುಪ್ಪಟ್ಟು ಪ್ರಕರಣದ ಅರ್ಜಿ ವಿಚಾರಣೆ ವಿಚಾರದಲ್ಲಿ ಕಾನೂನು ತನ್ನ ಕಾರ್ಯ ನಿರ್ವಹಿಸುತ್ತದೆ. ಆನರ್ಹ ಶಾಸಕರ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕಾನೂನು ಪ್ರಕಾರ ಕ್ರಮ ಜರುಗಿಸಲಿದೆ ಎಂದರು.

ಸಂಸದ ನಾರಾಯಣ ಸ್ವಾಮಿಯನ್ನು ದಲಿತ ಎಂಬ ಕಾರಣಕ್ಕೆ ಗ್ರಾಮಕ್ಕೆ ಸೇರಿಸದ ವಿಷಯದ ಬಗ್ಗೆ ಕೇಳಲಾದ ಪ್ರಶ್ನೆಗೆ,  ಹೆಚ್ಚು ಮಾಹಿತಿ ಇಲ್ಲ. ಆದರೆ ಇಂತಹ ಘಟನೆ ನಡೆಯಬಾರದು. ಇದು ಯಾರು ಮಾಡಿದರೂ ತಪ್ಪು ಎಂದು ಹೇಳಿದರು.

ಸಂಚಾರಿ ನಿಯಮ ಉಲ್ಲಂಘನೆ ದಂಡದ ಪ್ರಮಾಣ ರಾಜ್ಯ ಸರ್ಕಾರ ಕಡಿತಗೊಳಿಸಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next