Advertisement

Maddur: ಎಳನೀರು ಮಾರ್ಕೆಟ್‌ ನಲ್ಲಿ ಮೂಲಸೌಕರ್ಯವೇ ಇಲ್ಲ

02:40 PM Sep 12, 2023 | Team Udayavani |

ಮದ್ದೂರು: ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಎಳನೀರು ವ್ಯಾಪಾರ ವಹಿವಾಟು ನಡೆಸುವ ಮೂಲಕ ಪ್ರಥಮ ಸ್ಥಾನದ ಹೆಗ್ಗಳಿಕೆ ಹೊಂದಿರುವ ಮದ್ದೂರು ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆ ಹಲವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

Advertisement

ಜಿಲ್ಲೆಯ ತಾಲೂಕು ಕೇಂದ್ರದಲ್ಲಿರುವ ಎಪಿಎಂಸಿ ಎಳನೀರು ಮಾರುಕಟ್ಟೆ ವ್ಯಾಪಾರ ವಹಿವಾಟಿನಲ್ಲಿ ರಾಜ್ಯ ದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಮಾರುಕಟ್ಟೆ ಆವರಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಗ್ರಾಹಕರು, ವರ್ತಕರು, ರೈತರು, ವ್ಯಾಪಾರಸ್ಥರು, ದಿನನಿತ್ಯ ಬಳಲುವಂತಾಗಿದೆ.

ಹತ್ತು ಹಲವು ಸಮಸ್ಯೆಗಳು: ನೆರೆ ರಾಜ್ಯ ತಮಿಳುನಾಡು ಸೇರಿದಂತೆ ಮೈಸೂರು, ಚಾಮರಾಜನಗರ, ಹಾಸನ, ರಾಮನಗರ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ರೈತರು ಎಳನೀರನ್ನು ಖರೀದಿಸಿ ಮಾರು ಕಟ್ಟೆಯಲ್ಲಿ ವ್ಯಾಪಾರ ವಹಿವಾಟಿ ಗೆಂದು ಪ್ರತಿನಿತ್ಯ ಆಗ ಮಿಸುವ ವೇಳೆ ಹತ್ತು ಹಲವು ಸಮಸ್ಯೆಗಳನ್ನು ಎದುರಿ ಸುವಂತಾಗಿದೆ. ಮಾರುಕಟ್ಟೆಯಿಂದ ದಿನನಿತ್ಯ ದೆಹಲಿ, ರಾಜಸ್ಥಾನ, ಆಂಧ್ರಪ್ರದೇಶ, ಜೈಪುರ್‌, ಮುಂಬೈ, ಔರಂ ಗಬಾದ್‌, ಮಹಾರಾಷ್ಟ್ರ ಇನ್ನಿತರ ರಾಜ್ಯಗಳಿಗೆ ಎಳ ನೀರನ್ನು ಸಾಗಿಸುವ ಮಾರುಕಟ್ಟೆ ಕಳೆದ ಹಲವು ವರ್ಷ ಗಳಿಂದಲೂ ಮೂಲ ಸೌಲಭ್ಯಗಳಿಂದ ಬಳಲುವಂತಾ ಗಿದ್ದು, ಅ ಧಿಕಾರಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ.

ದುರಸ್ತಿಗೊಳ್ಳದ ವಿವಿಧ ಕಟ್ಟಡ: ದೂರದ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸುವ ವ್ಯಾಪಾರಸ್ಥರು ರೈತರು ವರ್ತಕರು ಗ್ರಾಹಕರಿಗೆ ಅನುಕೂಲವಾಗಲೆಂಬ ಸದುದ್ದೇ ಶದಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಿರುವ ಶ್ರಮಿಕ ಭವನ, ರೈತರ ವಿಶ್ರಾಂತಿ ಕೊಠಡಿ, ಗೋದಾ ಮುಗಳು ಅಧ್ವಾನಗೊಂಡು ಹಲವು ವರ್ಷಗಳ ಕಳೆದಿದ್ದರೂ ದುರಸ್ತಿ ಕಾರ್ಯಕ್ಕೆ ಮುಂದಾಗದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಹಿಂದಿನ ಲೋಕಸಭಾ ಸದಸ್ಯರ ಅನುದಾನದಲ್ಲಿ ನಿರ್ಮಿಸಿರುವ ದನದ ಕೊಟ್ಟಿಗೆ ಹಾಳು ಕೊಂಪೆಯಾಗಿ ಮಾರ್ಪಟ್ಟಿದ್ದು, ಕೋಟ್ಯಂತರ ರೂ. ಅನುದಾನದಲ್ಲಿ ನಿರ್ಮಿಸಿರುವ ಹಲವು ಕೇಂದ್ರಗಳು ಇಂದು ಉಪಯೋಗಕ್ಕೆ ಬಾರದಂತಿವೆ. ದೂರದ ಜಿಲ್ಲೆ ಮತ್ತು ನೆರೆ ರಾಜ್ಯಗಳಿಂದ ಆಗಮಿಸುವ ಚಾಲಕರು, ವ್ಯಾಪಾ ರಸ್ಥರು, ವರ್ತಕರು, ರೈತರು ಹಲವು ಸಮಸ್ಯೆಗಳನ್ನು ದಿನನಿತ್ಯ ಎದುರಿಸುವಾಂತಗಿದ್ದು, ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಇಲ್ಲದೆ ದಿನನಿತ್ಯದ ಬದುಕನ್ನು ದೂಡಲು ಪ್ರಾಂಗಣವನ್ನೇ ಅವಲಂಬಿ ಸಬೇಕಾದ ಸ್ಥಿತಿ ಬಂದೊದಗಿದೆ.

ಅನುದಾನ ಬಳಸದ ಅಧಿಕಾರಿಗಳು: ಮಾರುಕಟ್ಟೆಯ ಸುತ್ತಲು ಇರುವ ಚರಂಡಿಯಲ್ಲಿ ತುಂಬಿ ನಿಂತಿರುವ ತ್ಯಾಜ್ಯ ಎಲ್ಲೆಂದರಲ್ಲಿ ಅನುಪಯುಕ್ತ ವಸ್ತುಗಳು, ಬಯಲು ಪ್ರದೇಶದಲ್ಲಿ ಮಲಮೂತ್ರ ವಿಸರ್ಜನೆ, ಹೊರ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯಗಳಿಂದ ಆಗಮಿಸುವ ಚಾಲಕರು, ರೈತರು, ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಪೂರೈಸಲು ಕೊಳವೆ ನಲ್ಲಿಗಳನ್ನೇ ಅವಲಂಬಿಸಬೇಕಿದೆ. ದಿನನಿತ್ಯ ಕೋಟ್ಯಂತರ ರೂ. ವ್ಯಾಪಾರ ವಹಿವಾಟು ನಡೆಸುವ ಮಾರುಕಟ್ಟೆಯನ್ನು ದುರಸ್ತಿ ಮಾಡಲು ಹಿಂದೇಟು ಹಾಕುವ ಅಧಿಕಾರಿಗಳು ಸರ್ಕಾರದಿಂದ ಬರುವ ಅನುದಾನವನ್ನು ಬಳಕೆ ಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

Advertisement

ನಿತ್ಯ 50ಕ್ಕೂ ಹೆಚ್ಚು ಲೋಡ್‌ ಎಳನೀರು ರಫ್ತು: ಎಪಿಎಂಸಿ ಮಾರುಕಟ್ಟೆಯ ಆಡಳಿತ ಮಂಡಳಿ ಕಾರ್ಯನಿರ್ವಹಿಸಿದರೆ ಸಂಬಂ ಧಿಸಿದ ಸಚಿವರು ಹಾಗೂ ಸರ್ಕಾರದ ಮೇಲೆ ಒತ್ತಡ ತಂದು ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತಿತ್ತು, ಆದರೆ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಹಲವು ಅಭಿವೃದ್ಧಿ ಕಾರ್ಯಗಳು ಕುಂಟಿತಗೊಳ್ಳಲು ಕಾರಣವಾಗಿವೆ. ಮಾರುಕಟ್ಟೆಯಿಂದ ಪ್ರತಿನಿತ್ಯ 50ಕ್ಕೂ ಹೆಚ್ಚು ಎಳನೀರು ಲೋಡುಗಳು ನೆರೆ ರಾಜ್ಯಗಳಿಗೆ ರವಾನೆ ಯಾಗುತ್ತಿದ್ದು ಜತೆಗೆ ಬೆಂಗಳೂರು ನಗರಕ್ಕೂ ಸರಬರಾಜು ಆಗುವ ಮೂಲಕ ಅಲ್ಲಿನ ಜನರ ದಾಹ ತೀರಿಸುತ್ತಿದ್ದು, ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಮದ್ದೂರು ಎಪಿಎಂಸಿ ಮಾರುಕಟ್ಟೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಹಲವು ಕಾಮಗಾರಿಗಳು ಸ್ಥಗಿತ: ಅಭಿವೃದ್ಧಿ ಮಾತ್ರ ಶೂನ್ಯವಾಗಿದ್ದು, ಸಮರ್ಪಕವಾಗಿ ಕಸ ವಿಲೇವಾರಿ ಮಾಡಿದ ಕಾರಣ ವರ್ತಕರು, ರೈತರು, ವ್ಯಾಪಾರಸ್ಥರು, ಹಲವು ಅಧ್ವಾನಗಳ ನಡುವೆ ವ್ಯಾಪಾರ ನಡೆಸುವ ಜೊತೆಗೆ ಮೂಗು ಮುಚ್ಚಿಕೊಂಡೆ ದಿನದೂಡಬೇಕಾದ ಅನಿವಾರ್ಯತೆ ಕಂಡು ಬಂದಿದೆ. ಅ ಧಿಕಾರಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದು, ಕಳೆದ ಸರ್ಕಾರದ ಅವಧಿಯಲ್ಲಿ ನಾಲ್ಕು ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಅನುದಾನ ಸಾಕಾಗದ ಹಿನ್ನೆಲೆಯಲ್ಲಿ ರಸ್ತೆ ಡಾಂಬರೀಕರಣ ಸೇರಿದಂತೆ ಇನ್ನಿತರ ಕಾಮಗಾರಿಗಳು ಸ್ಥಗಿತಗೊಂಡಿವೆ.

ಅಧಿಕ ಬೆಲೆಗೆ ಟೆಂಡರ್‌: ಅಧಿಕಾರಕ್ಕೆ ಬಂದ ಸರ್ಕಾರಗಳು ಎಪಿಎಂಸಿ ಮಾರುಕಟ್ಟೆಗೆ ಚುನಾಯಿತ ಪ್ರತಿನಿ ಧಿಗಳನ್ನು ಆಯ್ಕೆ ಮಾಡಲು ಚುನಾವಣಾ ಪ್ರಕ್ರಿಯೆ ಕೈಗೊಳ್ಳದ ಹಿನ್ನೆಲೆಯಲ್ಲಿ ಅಭಿವೃದ್ಧಿಯಿಂದ ಕುಂಟಿತಗೊಳ್ಳಲು ಪ್ರಮುಖ ಕಾರಣವಾಗಿದೆ. ಮಾರುಕಟ್ಟೆ ಆವರಣದಲ್ಲಿ ಅಶುಚಿತ್ವ ತಾಂಡವಾಡುತ್ತಿದ್ದು, ಚರಂಡಿಯಲ್ಲಿ ತ್ಯಾಜ್ಯ ವಸ್ತುಗಳಿಂದ ದುರ್ವಾಸನೆ ಬೀರುತ್ತಿದ್ದು, ಜತೆಗೆ ಪ್ರಾಂಗಣದ ಸುತ್ತಮುತ್ತ ಮಲಮೂತ್ರ ವಿಸರ್ಜನೆ ಮಾಡುವ ಮೂಲಕ ಗಬ್ಬೆದ್ದು ನಾರುತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದ್ದು, ಅ ನೈರ್ಮಲ್ಯದಿಂದ ಕೂಡಿರುವ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲು ಮತ್ತು ದಿನನಿತ್ಯದ ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಲು ಅಧಿಕ ಬೆಲೆಗೆ ಟೆಂಡರ್‌ ಪ್ರಕ್ರಿಯೆ ಕೈಗೊಂಡಿದ್ದರು. ಎಳನೀರು ಮಾರುಕಟ್ಟೆ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ.

ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಲು ಅಧಿಕ ಬೆಲೆಗೆ ಟೆಂಡರ್‌ ಪ್ರಕ್ರಿಯೆ ನೀಡಿದ್ದರೂ ಸಹ ಸಮರ್ಪಕವಾಗಿ ಕೈಗೊಳ್ಳದ ಕಾರಣ ಎಲ್ಲೆಡೆ ಅಶುಚಿತ್ವ ತಾಂಡವಾಡುತ್ತಿದೆ. ಕೂಡಲೇ ಸಂಬಂಧಿ ಸಿದ ಚುನಾಯಿತ ಪ್ರತಿನಿ ಧಿಗಳು ಹಾಗೂ ಅಧಿಕಾರಿಗಳು ಮಾರುಕಟ್ಟೆ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ವರ್ತಕರು, ವ್ಯಾಪಾರಸ್ಥರು, ಗ್ರಾಹಕರಿಗೆ, ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕಿದೆ. -ಎಸ್‌.ಶಿವರಾಜು, ಎಳನೀರು ವ್ಯಾಪಾರಿ ಹಾಗೂ ಎಪಿಎಂಸಿ ಮಾಜಿ ನಿರ್ದೇಶಕ

-ಎಸ್‌.ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next