Advertisement

ಕೋವಿಡ್ ಗಿಂತ ದೊಡ್ಡ ಗ್ರಹಣ ಯಾವುದೂ ಇಲ್ಲ; ಸಚಿವ ಬಿ.ಸಿ. ಪಾಟೀಲ್

06:25 PM Jun 21, 2020 | keerthan |

ಹಾವೇರಿ: ಇಂದು ಕೋವಿಡ್-19ಗಿಂತ ದೊಡ್ಡ ಗ್ರಹಣ ಯಾವುದೂ ಇಲ್ಲ. ಗ್ರಹಣ ಹಿಡಿದಿದೆ ಎಂದು ಯಾರೂ ಉಸಿರಾಡುವುದನ್ನು ನಿಲ್ಲಿಸುವುದಿಲ್ಲ. ಗ್ರಹಣ ಪ್ರಕೃತಿಯಲ್ಲಿ ನಡೆಯುವ ಸಹಜ ಕ್ರಿಯೆ. ಹಾಗಾಗಿ ಗ್ರಹಣಕ್ಕೆ ಹೆಚ್ಚು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ಅವರು ರವಿವಾರ ಹಿರೇಕೆರೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲವು ಜನರು ಗ್ರಹಣವನ್ನೇ ಉದ್ಯೋಗ ಮಾಡಿಕೊಂಡು ಅಪಪ್ರಚಾರ ಮಾಡುವುದು, ಜನರಲ್ಲಿ ಮೂಢನಂಬಿಕೆ ಬಿತ್ತುವುದು ಮಾಡುತ್ತಾರೆ. ಇದು ಸರಿಯಲ್ಲ ಎಂದರು.

ಗಡಿಯಲ್ಲಿ ನಡೆದ ಭಾರತ-ಚೀನಾ ಸೈನಿಕರ ಘರ್ಷಣೆ ವಿಚಾರವಾಗಿ ಕಾಂಗ್ರೆಸ್‌ನವರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಟೀಕೆ ಮಾಡುವುದು ಬಿಟ್ಟರೆ ಬೇರೆ ಏನೂ ಕೆಲಸವಿಲ್ಲ. ಟೀಕೆ ಮಾಡುವುದನ್ನೇ ತಮ್ಮ ಉದ್ಯೋಗವಾಗಿಸಿಕೊಂಡಿದ್ದಾರೆ ಎಂದರು.

ನಮ್ಮ ದೇಶದ ಮೇಲೆ ಯಾರೇ ಆಕ್ರಮಣ ಮಾಡಿದರೂ ಪ್ರತ್ಯುತ್ತರ ಕೊಡುವುದು ನಮ್ಮ ಕರ್ತವ್ಯ. ಅದನ್ನು ನಮ್ಮ ಪ್ರಧಾನಿಯವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಅದಕ್ಕೂ ಟೀಕೆ ಮಾಡುವುದು, ಕೋವಿಡ್-19 ಸೋಂಕಿಗೂ ಟೀಕೆ ಮಾಡಿದರೆ ಟೀಕೆಗೆ ಅರ್ಥ ಇರಲ್ಲ. ಟೀಕೆಗಳು ಯಾವತ್ತೂ ಸಕಾರಾತ್ಮಕವಾಗಿರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next