Advertisement

“I.N.D.I.A ಒಕ್ಕೂಟದಲ್ಲಿ ವೈಮನಸ್ಸಿಲ್ಲ” – ನಿತೀಶ್‌ ಕುಮಾರ್‌ 

09:00 PM Dec 06, 2023 | Team Udayavani |

ಪಾಟ್ನಾ: ವಿಪಕ್ಷಗಳ ಒಕ್ಕೂಟದಲ್ಲಿ ಬಿರುಕು ಮೂಡಿದೆ, ಅದೇ ಕಾರಣಕ್ಕಾಗಿ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಒಕ್ಕೂಟದ ಸಭೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದಾರೆ ಎನ್ನುವ ಸುದ್ದಿ ಕೇವಲ ವದಂತಿ ಮಾತ್ರ ಎಂದು ನಿತೀಶ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಪಂಚರಾಜ್ಯ ಚುನಾವಣೆಗಳ ಫ‌ಲಿತಾಂಶದ ಬೆನ್ನಲ್ಲೇ ಬುಧವಾರ ವಿಪಕ್ಷಗಳ ಒಕ್ಕೂಟವಾದ ಇಂಡಿಯಾದ ಸಭೆ ನಡೆಸಲು ಯೋಜಿಸಲಾಗಿತ್ತು. ಆದರೆ, ಒಕ್ಕೂಟದ ಹಲವು ನಾಯಕರು ಭಾಗಿಯಾಗದ ಕಾರಣ ಸಭೆಯನ್ನು ಡಿ.17ಕ್ಕೆ ಮುಂದೂಡಲಾಗಿದೆ.

Advertisement

ಒಕ್ಕೂಟದ ನಾಯಕರ ನಡುವೆ ವೈಮನಸ್ಸಿರುವ ಕಾರಣಕ್ಕಾಗಿಯೇ ನಿತೀಶ್‌ ಸಭೆ ನಿರಾಕರಿಸಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಿತೀಶ್‌ ಸ್ಪಷ್ಟನೆ ನೀಡಿದ್ದು, ನನಗೆ ಜ್ವರ ಬಂದಿದ್ದ ಕಾರಣ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದೆ. ಅದರ ಹೊರತಾಗಿ ಮತ್ತೆಲ್ಲವೂ ಕೇವಲ ವದಂತಿ ಮಾತ್ರ. ಇದೇ ತಿಂಗಳ 3ನೇ ವಾರಕ್ಕೆ ಸಭೆ ಮುಂದೂಡಲಾಗಿದೆ ಆಗ ನಾನು ಖಂಡಿತವಾಗಿಯೂ ಭಾಗಿಯಾಗುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next