Advertisement
ಪ್ರಾಣಿಗಳಿಗೆ ನಗರದಲ್ಲಿ ಶ್ಮಶಾನ ನಿರ್ಮಾಣ ಮಾಡುವ ಕುರಿತು ಕೆಲವು ತಿಂಗಳ ಹಿಂದೆ ಪಾಲಿಕೆ ಸಾಮಾನ್ಯ ಸಭೆಗೆ ಪ್ರಸ್ತಾವ ಬಂದಿತ್ತು. ಆದರೆ ಆ ಕಾರ್ಯಸೂಚಿಗೆ ಪಾಲಿಕೆ ಸದಸ್ಯರ ಬೆಂಬಲ ಸಿಗದ ಪರಿಣಾಮ ಈ ಯೋಜನೆ ಅಷ್ಟೊಂದು ಮಹತ್ವ ಪಡೆದಿಲ್ಲ. ಶಕ್ತಿನಗರ ಬಳಿಯ ಹಿಂದೂ ರುದ್ರಭೂಮಿ ಅಥವಾ ಇತರ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿಯಿಂದ ಪ್ರಾಣಿಗಳ ಶ್ಮಶಾನ ನಿರ್ಮಾಣ ಮಾಡಬೇಕು ಎಂದು ಪ್ರಾಣಿಪ್ರಿಯರು ಆಗ್ರಹಿಸಿದ್ದರು. ಆದರೆ ಸ್ಥಳೀಯಾಡಳಿತ ಈ ಕುರಿತು ಅಷ್ಟೊಂದು ಗಮನ ನೀಡಲಿಲ್ಲ.
Related Articles
Advertisement
ಮರಣ ಹೊಂದಿದ ಪ್ರಾಣಿಗಳನ್ನು ಸುಡಲು ಅಥವಾ ಹೂಳಲು ಬೆಂಗಳೂರು ನಗರದಲ್ಲಿ ಕೆಲವೊಂದು ಶ್ಮಶಾನಗಳಿವೆ. ಕೆಲವೊಂದು ಖಾಸಗಿ ಸಂಸ್ಥೆಗಳು ರಾಜ್ಯ ಅರಣ್ಯ ಇಲಾಖೆಯ ಸಹಯೋಗದೊಂದಿಗೂ ಶ್ಮಶಾನಗಳನ್ನು ನಿರ್ಮಿಸಿವೆ. ಸಾಕಿದ ಪ್ರಾಣಿಗಳು ತೀರಿ ಹೋದಾಗ ಅವುಗಳನ್ನು ಅಲ್ಲಿಗೆ ತಂದು ಸಮಾಧಿ ಮಾಡಲಾಗುತ್ತದೆ. ಪ್ರತಿವರ್ಷ ಆ ದಿನ ಅಲ್ಲಿಗೆ ಬಂದು ಆ ಸಮಾಧಿ ಮೇಲೆ ಹೂವು ಹಾಕಿ ಸ್ಮರಿಸುತ್ತಾರೆ.
ಶ್ಮಶಾನ ಅಗತ್ಯ: ಪ್ರಾಣಿಗಳು ಮರಣ ಹೊಂದಿದರೆ ಅವುಗಳ ಅಂತ್ಯಕ್ರಿಯೆಗೆ ನಗರದಲ್ಲಿ ಶ್ಮಶಾನ ಇಲ್ಲ. ಈ ಹಿನ್ನೆಲೆಯಲ್ಲಿ ಶ್ಮಶಾನ ಅಗತ್ಯವಿದೆ ಎಂದು ಪ್ರಧಾನಿಗಳಿಗೆ ಮನವಿ ಮಾಡಿದ್ದೇನೆ. ಅಲ್ಲಿಂದ ಸೂಕ್ತ ಉತ್ತರ ಬಂದಿದ್ದು, ಸ್ಥಳೀಯಾಡಳಿತ ಗಮನಹರಿಸುವುದಾಗಿ ತಿಳಿಸಲಾಗಿದೆ. ಪಾಲಿಕೆ, ಜನಪ್ರತಿನಿಧಿಗಳಿಗೂ ಮನವಿ ನೀಡಿ ದರೂ ಬೇಡಿಕೆ ಈಡೇರಲಿಲ್ಲ. – ಗಣೇಶ್ ನಾಯಕ್ ಸುಜೀರ್ ಬೆಂದೂರ್ವೆಲ್, ಪ್ರಾಣಿ ಪ್ರೇಮಿ
ಸೂಕ್ತ ಕ್ರಮ: ಸಾವನ್ನಪ್ಪಿದ ಪ್ರಾಣಿಗಳನ್ನು ಸುಡಲು ನಗರದೊಳಗೆ ಶ್ಮಶಾ ನ ಬೇಕು ಎಂದು ಸಂಘ-ಸಂಸ್ಥೆಗಳಿಂದ ಈಗಾಗಲೇ ಮನವಿಗಳು ಬಂದಿವೆ. ನಗರದೊಳಗೆ ಸೂಕ್ತ ಜಾಗದ ಕೊರತೆ ಇದೆ. ಆದರೂ ಪರಿಶೀಲಿಸಿ ಪ್ರಾಣಿಗಳಿಗೆ ಶ್ಮಶಾ ನ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ವೇದವ್ಯಾಸ ಕಾಮತ್, ಶಾಸಕರು
-ನವೀನ್ ಭಟ್ ಇಳಂತಿಲ