Advertisement

ರೈಲು ನಿಲ್ದಾಣದಲ್ಲಿಲ್ಲ ಕೊರೊನಾ ಎಚ್ಚರ

03:51 PM Mar 17, 2020 | Suhan S |

ಯಾದಗಿರಿ: ಕೊರೊನಾ ಎಲ್ಲೆಡೆ ಆತಂಕ ಸೃಷ್ಟಿಸಿದೆ. ಹೊರ ರಾಜ್ಯದ ಜನರು ಆಗಮಿಸುವ ಮತ್ತು ನಿರ್ಗಮಿಸುವ ಪ್ರಮುಖ ಸಂಚಾರ ತಾಣವಾದ ನಗರದ ರೈಲು ನಿಲ್ದಾಣದಲ್ಲಿ ಕೊರೊನಾ ಕುರಿತು ಯಾವುದೇ ಮುನ್ನೆಚ್ಚರಿಕೆ ವಹಿಸದಿರುವುದು ಕಂಡು ಬಂದಿದೆ.

Advertisement

ನಗರದ ರೈಲು ನಿಲ್ದಾಣದಿಂದ ನಿತ್ಯ ತೆಲಂಗಾಣ ಸೇರಿದಂತೆ ಜಿಲ್ಲೆಯ ಜನರು ಮಹಾರಾಷ್ಟ್ರ, ಬೆಂಗಳೂರು ಹಾಗೂ ಚೆನ್ನೈ ಮಾರ್ಗವಾಗಿ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ರೈಲು ಮಾರ್ಗವಾಗಿ ಪ್ರಾಯಾಣಿಸುವ ಕೆಲವರು ಬಾಯಿ ಮತ್ತು ಮೂಗಿಗೆ ಕೈ ವಸ್ತ್ರ, ಮಾಸ್ಕ್ ಬಳಸುತ್ತಿದ್ದಾರೆ. ರೈಲು ನಿಲ್ದಾಣದಲ್ಲಿ ಕೆಲವೆಡೆ ಕರ ಪತ್ರ ಅಂಟಿಸಿರುವುದನ್ನು ಬಿಟ್ಟರೆ ಸ್ಕ್ರೀನಿಂಗ್‌ ಇನ್ನಿತರ ತಪಾಸಣೆ ಮಾಡಲಾಗುತ್ತಿಲ್ಲ. ಹೊರ ರಾಜ್ಯದಿಂದ ಬಂದವರ ಆರೋಗ್ಯ ತಪಾಸಣೆ ಮಾಡುತ್ತಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ಹಾಗೂ ಮಹಾರಾಷ್ಟ್ರದಲ್ಲಿಯೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಆದರೆ ಈ ಬಗ್ಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಲಾಖೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎನ್ನುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೊರೊನಾ ಶಂಕಿತರು ಮತ್ತು ಅಂತಹ ಲಕ್ಷಣ ಇರುವವರು ನಮ್ಮ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರ ವಹಿಸಬೇಕು. ಪ್ರತಿಯೊಬ್ಬರು ವೈಯಕ್ತಿಕ ಶುಚಿತ್ವ ಹಾಗೂ ಮುನ್ನೆಚ್ಚರಿಕೆ ಪಾಲಿಸಬೇಕು. ರೈಲು ನಿಲ್ದಾಣದಲ್ಲಿಯೂ ನಿಗಾ ವಹಿಸಲಾಗುವುದು. -ಎಂ. ಕೂರ್ಮಾರಾವ್‌, ಡಿಸಿ

 

-ಅನೀಲ ಬಸೂದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next