Advertisement

ಪ್ರಶ್ನೆಯಾಗಿಯೇ ಉಳಿದ ಕೋವಿಡ್ 19 ಪ್ರಕರಣಗಳಿವು!

11:04 PM Apr 04, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾದ ಹಲವಾರು ಕೋವಿಡ್ 19 ಸೋಂಕು ಪ್ರಕರಣಗಳು ಪ್ರಶ್ನೆಯಾಗಿ ಉಳಿದಿದ್ದು ರಾಜ್ಯ ಸರಕಾರದ ನಿದ್ದೆಗೆಡಿಸಿವೆ. ಆರೋಗ್ಯ ಇಲಾಖೆ ಅಧಿಕಾರಿಗಳು ಇವುಗಳ ಹಿಂದೆ ಬಿದ್ದಿದ್ದಾರೆ. ಆದರೆ ಉತ್ತರ ಮಾತ್ರ ಸಿಗುತ್ತಿಲ್ಲ.

Advertisement

ರಾಜ್ಯದಲ್ಲಿ ಕೋವಿಡ್ 19 ಸೋಂಕು ದೃಢಪಟ್ಟವರ ಸಂಖ್ಯೆ 128 ಇದ್ದು, ಈ ಪೈಕಿ 19 ಸೋಂಕಿತರಿಗೆ ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲ. ಯಾರಿಂದ, ಎಲ್ಲಿ, ಯಾವಾಗ ಸೋಂಕು ಸೋಂಕು ತಗಲಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಇಂದಿಗೂ ಆರೋಗ್ಯ ಇಲಾಖೆ ಈ ಕುರಿತು ವೈದ್ಯಕೀಯ ತನಿಖೆ ನಡೆಸುತ್ತಲಿದೆ. ಇನ್ನು ಪ್ರಶ್ನೆಯಾಗಿಯೇ ಉಳಿದಿರುವ ಈ ಸೋಂಕಿತರು ಈಗಾಗಲೇ ಏಳು ಮಂದಿಗೆ ಸೋಂಕು ಹರಡಿಸಿದ್ದಾರೆ.

ನೂರಾರು ಮಂದಿ ಶಂಕಿತರಾಗಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಇಂಥ ಪ್ರಶ್ನೆಯಾಗಿ ಉಳಿಯುತ್ತಿರುವ ಸೋಂಕು (ಯಾವ ಸೋಂಕಿತರ ನಿಖರ ಸಂಪರ್ಕ ಇಲ್ಲದ) ಪ್ರಕರಣಗಳು ಹೆಚ್ಚಳವಾಗುತ್ತಲೇ ಇರುವುದು ಆತಂಕ ಮೂಡಿಸಿದೆ.

ಪ್ರಶ್ನೆಯಾಗಿರುವ ಪ್ರಕರಣಗಳು
– ಮೈಸೂರಿನ ನಂಜನಗೂಡು ಔಷಧಿ ಕಾರ್ಖಾನೆ ಸಿಬಂದಿಯೊಬ್ಬರಲ್ಲಿ ಈ ವೈರಸ್‌ ಕಾಣಿಸಿಕೊಂಡಿತ್ತು. ಬಳಿಕ ಅದೇ ಕಂಪೆನಿಯ ಇತರ 14 ಸಿಬಂದಿಯಲ್ಲಿ ಸೋಂಕು ದೃಢಪಟ್ಟಿದೆ.
– ಮಾ. 10ರಂದು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯ ಹತ್ತು ತಿಂಗಳ ಮಗುವಿನಲ್ಲಿ ಸೋಂಕು ದೃಢಪಟ್ಟಿತು. ಈ ಮಗುವಿಗೆ ವಿದೇಶ ಪ್ರಯಾಣ ಮಾಡಿದ ಮತ್ತು ವಿದೇಶದಿಂದ ಬಂದ ವ್ಯಕ್ತಿಗಳ ನೇರ ಸಂಪರ್ಕವೇ ಇರಲಿಲ್ಲ.
– ಮಾ. 31ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಒಂದೇ ಕುಟುಂಬದ ಮೂರು ಮಂದಿಗೆ ಸೋಂಕು ದೃಢಪಟ್ಟಿತು. ಇವರು ದಾವಣಗೆರೆ ಮೂಲಕ ರೈಲಿನಲ್ಲಿ ಬೆಂಗಳೂರಿಗೆ ಭೇಟಿ ನೀಡಿ ಹಿಂದಿರುಗಿದ ಕೆಲವು ದಿನಗಳಲ್ಲಿಯೇ ಸೋಂಕು ಕಾಣಿಸಿಕೊಂಡಿದೆ.
– ಮಾ. 31ರಂದು ಬೆಂಗಳೂರಿನ 62 ವರ್ಷದ ಮಹಿಳೆಗೆ ಸೋಂಕು ದೃಢ.
– ಎ. 2ರಂದು 24 ವರ್ಷದ ಬೆಂಗಳೂರು ಯುವಕನಲ್ಲಿ ಸೋಂಕು ದೃಢ.
– ಎ. 2ರಂದು ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಗಲ ಕೋಟೆಯ 75 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟದೆ.

Advertisement

Udayavani is now on Telegram. Click here to join our channel and stay updated with the latest news.

Next