Advertisement

ತೆಕ್ಕಟ್ಟೆ :ವರದಿಯತ್ತ ಗ್ರಾಮಸ್ಥರ ಚಿತ್ತ : ಮೆಡಿಕಲ್‌ಗ‌ೂ ತಟ್ಟಿದ ಬಿಸಿ !

09:12 PM Apr 30, 2020 | Sriram |

ತೆಕ್ಕಟ್ಟೆ: ಮಂಡ್ಯ ಮೂಲದ ಕೋವಿಡ್‌19 ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಸ್ನಾನ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ನ್ನು ಸಂಪೂರ್ಣ ಸೀಲ್‌ ಡೌನ್‌ ಮಾಡಿದ್ದು ಅಲ್ಲಿದ್ದವರು ವಿವಿಧ ಆಸ್ಪತ್ರೆಯ ಐಸೋಲೇಶನ್‌ ವಾರ್ಡ್‌ ನಲ್ಲಿದ್ದ ಕ್ವಾರಂಟೈನ್‌ನಲ್ಲಿದ್ದ ಒಟ್ಟು 19 ಮಂದಿಯ ಗಂಟಲು ದ್ರವ ಪರೀಕ್ಷೆಗಾಗಿ ಲ್ಯಾಬ್‌ಗ ಕಳುಹಿಸಲಾಗಿದ್ದು ಆ ವರದಿಯ ಮೇಲೆ ಎಲ್ಲರ ಚಿತ್ತವಿದ್ದು , ಪರಿಣಾಮ ಕಳೆದೆರಡು ದಿನಗಳಿಂದಲೂ ಸಂಪೂರ್ಣ ಗ್ರಾಮವೇ ಸ್ತಬ್ಧಗೊಂಡಿದೆ.

Advertisement

ಮೆಡಿಕಲ್‌ಗ‌ೂ ತಟ್ಟಿದ ಬಿಸಿ
ಲಾಕ್‌ಡೌನ್‌ ಸಂದರ್ಭದಲ್ಲಿ ಮೆಡಿಕಲ್‌ ಶಾಪ್‌ ಗಳಿಗೆ ವಿಶೇಷವಾದ ವಿನಾಯಿತಿಗಳಿದ್ದರೂ ಸಹ ಕಳೆರಡು ದಿನಗಳಿಂದಲೂ ತೆಕ್ಕಟ್ಟೆ ಪ್ರಮುಖ ಭಾಗದಲ್ಲಿರುವ ಮೆಡಿಕಲ್‌ ಶಾಪ್‌ಗೆ ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ನೋಡುವ ದೃಷ್ಟಿ ಬದಲಾಯಿತು ?
ಸೋಂಕಿತ ವ್ಯಕ್ತಿಯಿಂದಾಗಿಯೇ ತೆಕ್ಕಟ್ಟೆ ಗ್ರಾಮದವರನ್ನು ನೋಡುವ ದೃಷ್ಟಿಯೇ ಬದಲಾಗಿದೆ ಎನ್ನುವುದಕ್ಕೆ ನಿದರ್ಶನವಾಗಿ ಎ.30ರಂದು ತೆಕ್ಕಟ್ಟೆ ನಿವಾಸಿಯೋರ್ವರು ಕುಂದಾಪುರದ ಬ್ಯಾಂಕ್‌ ತೆರಳಿದ ಸಂದರ್ಭದಲ್ಲಿ ತೆಕ್ಕಟ್ಟೆಯಿಂದ ಎಂದು ಹೇಳಿದಾಕ್ಷಣವೇ ಒಮ್ಮೆಲೇ ಅವರ ಬಳಿ ನಿಂತ ಮೂವರು ದೂರ ಸರಿದರು ಎನ್ನುವ ಘಟನೆ ಕೂಡಾ ಸಂಭವಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next