Advertisement

Thekkatte ರಾಮಕೃಷ್ಣ ಆಚಾರ್‌ಗೆ ಹುಟ್ಟೂರ ಸಮ್ಮಾನ

09:18 PM Nov 14, 2023 | Team Udayavani |

ತೆಕ್ಕಟ್ಟೆ : ಮಂಗಳೂರು ವಿ.ವಿ. ಗೌರವ ಡಾಕ್ಟರೇಟ್‌ ಪದವಿ ಪುರಸ್ಕೃತ ಮೂಡಬಿದಿರೆಯ ಎಸ್‌ಕೆಎಫ್‌ ಎಲಿಕ್ಸರ್‌ ಇಂಡಿಯಾ ಪ್ರೈ. ಲಿ. ಇದರ ಚೇರ್‌ಮನ್‌ ಡಾ| ಜಿ. ರಾಮಕೃಷ್ಣ ಆಚಾರ್‌ ಅವರಿಗೆ ಇಲ್ಲಿನ ಯಡಾಡಿ ಮತ್ಯಾಡಿ, ಹೊಂಬಾಡಿ ಮಂಡಾಡಿ ಮತ್ತು ಮೊಳಹಳ್ಳಿ ಯ ಗ್ರಾಮಸ್ಥರು ಒಂದಾಗಿ ನಡೆಸಿದ ಹುಟ್ಟೂರ ಸಮ್ಮಾನ ಸಮಾರಂಭವು ನ.11ರಂದು ಗುಡ್ಡೆಯಂಗಡಿ ಯಡಾಡಿ ಮತ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

Advertisement

ಚಿತ್ರನಟ ರಮೇಶ್‌ ಅರವಿಂದ್‌ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ದರು. ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರು ಸಮ್ಮಾನಿಸಿದರು. ಸಮ್ಮಾನ ಸಮಿತಿಯ ಅಧ್ಯಕ್ಷ ಬಿ.ಅರುಣ್‌ ಕುಮಾರ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ , ಸಮ್ಮಾನ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಎಂ. ದಿನೇಶ್‌ ಹೆಗ್ಡೆ ಮೊಳಹಳ್ಳಿ , ಲಯನ್‌ ಮಾಜಿ ರಾಜ್ಯಪಾಲ ಎನ್‌.ಎಂ. ಹೆಗ್ಡೆ ,
ಸವಿತಾ ರಾಮಕೃಷ್ಣ ಆಚಾರ್‌, ತೇಜಸ್‌ ಆಚಾರ್‌, ಪ್ರಜ್ವಲ್‌ ಆಚಾರ್‌, ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ, ಕಲರ್ ಕನ್ನಡ ವಾಹಿನಿಯ ಗಿಚ್ಚಿಗಿಲಿಗಿಲಿಯ ನಿರೂಪಕಿ ಜಾಹ್ನವಿ, ಹೊಂಬಾಡಿ ಮಂಡಾಡಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಶೆಟ್ಟಿ, ಗುಡ್ಡೆಯಂಗಡಿ ಯಡಾಡಿ ಮತ್ಯಾಡಿ ಸರಕಾರಿ ಹಿ. ಪ್ರಾ. ಶಾಲೆಯ ಮುಖ್ಯೋ ಪಾಧ್ಯಾಯಿನಿ ರಮಣಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣಗೈದು, ಎಚ್‌. ದೀನಪಾಲ್‌ ಶೆಟ್ಟಿ ಸ್ವಾಗತಿಸಿ, ಸಹ ಕಾರ್ಯದರ್ಶಿ ಎನ್‌. ಸತೀಶ ಅಡಿಗ ಮತ್ಯಾಡಿ ಪ್ರಶಸ್ತಿ ಪತ್ರ ವಾಚಿಸಿ, ಹಿರಿಯ ಪತ್ರಕರ್ತ ಕೆ.ಸಿ.ರಾಜೇಶ್‌ ನಿರೂಪಿಸಿ, ವಿದ್ವಾನ್‌ ದಾಮೋದರ ಶರ್ಮ ಸಹಕರಿಸಿ, ಕಾರ್ಯದರ್ಶಿ ಉಮೇಶ್‌ ಶೆಟ್ಟಿ ವಂದಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next