Advertisement

ಅಪಘಾತದ ಗಾಯಾಳು ತೆಕ್ಕಟ್ಟೆ ಸುರೇಂದ್ರ ದೇವಾಡಿಗ ಸಾವು

01:16 AM Jun 16, 2022 | Team Udayavani |

ತೆಕ್ಕಟ್ಟೆ : ಇಲ್ಲಿನ ರಾ.ಹೆ. 66ರ ತೆಕ್ಕಟ್ಟೆ ಪ್ರಭು ಕ್ರೀಮ್‌ ಪಾರ್ಲರ್‌ ಎದುರು ಮೇ 30ರಂದು ಸ್ಕೂಟಿ ವಾಹನಕ್ಕೆ ಬೈಕ್‌ ಢಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರ ಕಂಚುಗಾರುಬೆಟ್ಟು ನಿವಾಸಿ ಗುತ್ತಿಗೆದಾರ ಸುರೇಂದ್ರ ದೇವಾಡಿಗ (41) ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಜೂ. 15ರಂದು ಮೃತಪಟ್ಟಿದ್ದಾರೆ.

Advertisement

ಅಪಘಾತದ ಬಳಿಕ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಐದು ದಿನಗಳಲ್ಲೇ ಸುರೇಂದ್ರ ದೇವಾಡಿಗ ಅವರು ಮನೆಗೆ ವಾಪಸಾಗಿದ್ದರು. ಆದರೆ ಜೂ.13 ರಂದು ಏಕಾಏಕಿ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೆದುಳು ನಿಷ್ಕ್ರಿಯಗೊಂಡಿರುವ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಹೇಳಲಾಗಿದೆ.

ಕುಟುಂಬದ ಆಧಾರ ಸ್ತಂಭವಾಗಿದ್ದ ಅವರು ತಂದೆ, ತಾಯಿ ಮತ್ತು ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ.

ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next