Advertisement

Thekkatte, ಬೇಳೂರು: ಚಲಿಸುತ್ತಿರುವ ರೈಲಿನಿಂದ ಆಯಾತಪ್ಪಿ ಕೆಳಗೆ ಬಿದ್ದ ವ್ಯಕ್ತಿ:ಗಂಭೀರ ಗಾಯ

07:32 PM Oct 01, 2024 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಂಬಳಗದ್ದೆ ಸಮೀಪ ಕೊಂಕಣ ರೈಲ್ವೆ ಮಾರ್ಗದಲ್ಲಿ ಚಲಿಸುತ್ತಿದ್ದ ರೈಲಿನಿಂದ ವ್ಯಕ್ತಿಯೋರ್ವ ಆಯಾತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ (ಅ.1) ರಂದು ಮಧ್ಯಾಹ್ನ ಗಂಟೆ 12.15ರ ಸುಮಾರಿಗೆ ಸಂಭವಿಸಿದೆ.

Advertisement

ಮಾನವೀಯ ಸ್ಪಂದನೆ: ಉಡುಪಿಯಿಂದ ಕುಂದಾಪುರದ ಕಡೆಗೆ ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕನೋರ್ವ ಆಯಾತಪ್ಪಿ ಸಮೀಪದ ಗದ್ದೆಗೆ ಉರುಳಿ ಬಿದ್ದು ತಲೆಗೆ ಗಂಭೀರವಾದ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ನೋಡಿದ ಸ್ಥಳೀಯ ಮಹಿಳೆಯೋರ್ವರು ತತ್‌ಕ್ಷಣವೇ ಇಲ್ಲಿನ ಸ್ಥಳೀಯ ಅಕ್ಷಯ್‌ ಎನ್ನುವವರಿಗೆ ಮಾಹಿತಿ ನೀಡಿದರು. ಅವರು ತನ್ನ ಸ್ನೇಹಿತರಾದ ಕಾರ್ತಿಕ್‌ವೊಗೆಬೆಟ್ಟು, ಬಸವ ಹಾಗೂ ಶೌರ್ಯ ತಂಡ ನರಸಿಂಹ ಬೇಳೂರು ಅವರೊಂದಿಗೆ ತತ್‌ಕ್ಷಣವೇ ಸ್ಥಳಕ್ಕೆ ಧಾವಿಸಿ ಮಾನವೀಯವಾಗಿ ಸ್ಪಂದಿಸಿದ್ದಾರೆ.

ಕೋಟದ ಜೀವನ ಮಿತ್ರ ಆ್ಯಂಬುಲೆನ್ಸ್‌ನ ನಾಗರಾಜ್‌ ಪುತ್ರನ್‌, ಭರತ್‌ ಗಾಣಿಗ ಸಹಾಯದಿಂದ ಉಡುಪಿಯ ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ, ಗಾಯಗೊಂಡ ವ್ಯಕ್ತಿ ಉತ್ತರ ಭಾರತ ಮೂಲದವರು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next