Advertisement

ತೆಕ್ಕಟ್ಟೆ: ಏಕಕಾಲದಲ್ಲಿ 5 ವಿದ್ಯುತ್‌ ಕಂಬ ಧರಾಶಾಯಿ

12:22 AM Feb 09, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾಲಾಡಿಯಲ್ಲಿ ಫೆ. 8ರ ಅಪರಾಹ್ನ ಒಣಗಿದ ಬೃಹತ್‌ ಮರದ ಕೊಂಬೆ ವಿದ್ಯುತ್‌ ವಾಹಕದ ಮೇಲೆ ಬಿದ್ದು, ಜನವಸತಿ ಪ್ರದೇಶದ ನಡುವೆ ಹಾದು ಹೋಗಿರುವ ಟ್ರಾನ್ಸ್‌ಫಾರ್ಮರ್‌ ಸಹಿತ ಒಟ್ಟು 5 ವಿದ್ಯುತ್‌ ಕಂಬಗಳು ಧರಾಶಾಯಿಯಾಗಿದೆ. ಭಾರೀ ಅನಾಹುತ ತಪ್ಪಿದೆ. ತತ್‌ಕ್ಷಣವೇ ಸ್ಥಳೀಯ ಗ್ರಾ.ಪಂ. ಸದಸ್ಯ ಸುರೇಶ್‌ ಶೆಟ್ಟಿ, ಶರತ್‌ ಶೆಟ್ಟಿ ಅವರು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು. ಘಟನ ಸ್ಥಳಕ್ಕೆ ಗೋಪಾಡಿ ಮೆಸ್ಕಾಂ ಶಾಖಾಧಿಕಾರಿ ಸುನಿಲ್‌ ಆರ್‌., ಸಿಬಂದಿ ಕಂಬಗಳನ್ನು ತೆರವುಗೊಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next