Advertisement

Hunsur: ಕುಡಿತದ ಚಟಕ್ಕೆ ಯುವಕ ಬಲಿ

08:37 PM Apr 30, 2024 | Team Udayavani |

ಹುಣಸೂರು: ಅತಿಯಾದ ಕುಡಿತದ ದಾಸನಾಗಿದ್ದ 19 ವರ್ಷದ ಯುವಕನೋರ್ವ ಬಲಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

Advertisement

ತಾಲೂಕಿನ ಕಸಬಾ ಹೋಬಳಿಯ ರಾಮಪಟ್ಟಣದ ಲೇ.ಉಮೇಶ್- ರೇಣುಕಾರ ದಂಪತಿಯ ಏಕೈಕ ಪುತ್ರ ಆದಿತ್ಯ (19) ಮೃತಪಟ್ಟ ಯುವಕ.

ಘಟನೆಯ ವಿವರ: ಆದಿತ್ಯ ಹುಣಸೂರಿನ ರೇಣುಕಾ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ. ಸೋಮವಾರ ರಾತ್ರಿ ಬಾರ್ ನಲ್ಲಿ ಕೆಲಸ ಮುಗಿಸಿಕೊಂಡು ಅತಿಯಾದ ಮದ್ಯ ಸೇವಿಸಿ ತಾ.ಪಂ.ಕಚೇರಿ ಬಳಿಯ ಫಾಸ್ಟ್‌ ಫುಡ್‌ ನಿಲ್ಲಿಸುವ ಫುಟ್‌ಪಾತ್‌ ಬಳಿ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ.

ವಿಷಯ ತಿಳಿದ ಆತನ ತಾಯಿ ರೇಣುಕಾ ಹಾಗೂ ಕುಟುಂಬದವರು ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಿದರು.

ಕುಟುಂಬದವರು ಶವವನ್ನು ಕೊಂಡೊಯ್ದಿದ್ದರಿಂದಾಗಿ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next