Advertisement

ಸಿನಿಮೀಯ ರೀತಿ ಕಳ್ಳತನ: ಮನೆಯವರನ್ನು ಕಟ್ಟಿಹಾಕಿ ಚಿನ್ನಾಭರಣ ಕಳವು

10:10 AM Feb 15, 2022 | Team Udayavani |

ಸಂಕೇಶ್ವರ: ನಗರದ ಹೊರ ವಲಯದ ತೋಟದ ಮನೆಗೆ ಸಿನಿಮೀಯ ರೀತಿ ನುಗ್ಗಿದ ಸುಮಾರು 8 ಜನರ ಖದೀಮರ ತಂಡವು ಮನೆಯವರನ್ನು ಕಟ್ಟಿ ಹಾಕಿ, ಕತ್ತಿಗೆ ಚಾಕು ಇಟ್ಟು ಮನೆಯಲ್ಲಿನ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ದೂಚಿ ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

Advertisement

ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಸುಮಾರು 8ರಿಂದ 10 ಕಳ್ಳರು ನಗರದ ಹೊರ ವಲಯದ ತೋಟದ ಮನೆಯಲ್ಲಿರುವ ರಾಮ ಕಿಲ್ಲೇದಾರ ಮನೆಯ ಬೀಗ ಮುರಿದು ಸುಮಾರು 30 ಗ್ರಾಂ ಚಿನ್ನಾಭರಣ ಹಾಗೂ ಅವರ ಸಂಬಂಧಿಕರ ಮನೆಗೆ ನುಗ್ಗಿ‌ ಮನೆಯಲ್ಲಿದ್ದ ಮೂವರ ಕೈಕಾಲು ಕಟ್ಟಿ ಹಾಕಿ ಓರ್ವನ ಕತ್ತಿಗೆ ಚಾಕು ಹಿಡಿದು ಮನೆಯಲ್ಲಿದ್ದ ಸುಮಾರು 5.5 ಲಕ್ಷ ಮೌಲ್ಯದ 110 ಗ್ರಾಂ  ಚಿನ್ನಾಭರಣ ಮತ್ತು 75 ಸಾವಿರ ನಗದು ಹೀಗೆ ಒಟ್ಟು ಎರಡು ಮನೆಗಳಲ್ಲಿನ 140 ಗ್ರಾಂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಶ್ವಾನ ದಳ ಮತ್ತು ಬೆಳಚ್ವು ತಜ್ಞರು,  ಹೆಚ್ವುವರಿ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಮಹಾಲಿಂಗ ‌ನಂದಗಾವಿ, ಗೋಕಾಕ ಡಿಎಸ್ ಪಿ, ಸಂಕೇಶ್ವರ ಸಿಪಿಐ ಚನ್ನಗೀರಿ, ಪಿಎಸ್ ಐ ಗಣಪತಿ ಕೊಂಗನೊಳಿ ಹಾಗೂ ಸಿಬ್ಬಂದಿಗಳು, ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ತಂಡ ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next