Advertisement

ಮುಂಡಗೋಡ ವೈನ್‌ ಶಾಪ್‌ನಲ್ಲಿ ಕಳ್ಳತನ; ದೂರು ದಾಖಲು

08:33 PM Aug 19, 2021 | Team Udayavani |

ಮುಂಡಗೋಡ: ಕಳ್ಳರು ವೈನ್‌ ಶಾಪ್‌ನ ಮೇಲ್ಛಾವಾಣಿ ಕೊರೆದು ಒಳಗೆ ಪ್ರವೇಶಿಸಿ ಬಾಕ್ಸ್‌ನಲ್ಲಿದ್ದ 1,93,500 ರೂ. ನಗದನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

Advertisement

ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ತೃಪ್ತಿ ವೈನ್‌ ಶಾಪ್‌ ಕಳ್ಳತನವಾಗಿರುವುದು. ಈ ಶಾಪ್‌ ಪಕ್ಕದ ಬಿಲ್ಡಂಗ್‌ ಮೂಲಕ ಬಂದ ಕಳ್ಳರು ಮೊದಲಿಗೆ ವೈನ್‌ಶಾಪ್‌ನ ಮೇಲ್ಮಹಡಿ ತಗಡಿನ ಶೀಟ್‌ ತೆಗೆದಿದ್ದಾರೆ. ನಂತರ ರೂಮಿನ ಪಾಟಿಕಲ್ಲ ಒಡೆದು ಅದರ ಕೆಳಗೆ ಇದ್ದ ಕಟ್ಟಗಿಯ ಹಲಗೆಯನ್ನು ಮುರಿದು ಒಳಗೆ ಇಳಿದು ಪ್ಲಾಸ್ಟಿಕ್‌ ಬಾಕ್ಸ್‌ನಲ್ಲಿ ವ್ಯಾಪಾರ ಮಾಡಿ ಇಟ್ಟಿದ್ದ 1,93,500 ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಈರಜ್ಜ ಮಳವಳ್ಳಿ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪಿಎಸೈ ಎನ್‌.ಡಿ. ಜಕ್ಕಣ್ಣವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಇದನ್ನೂ ಓದಿ:ಕನ್ನಡೇತರರಿಗೆ ಕನ್ನಡ ಕಲಿಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ

ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮಾಹಿತಿ ಸಂಗ್ರಹಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಕಳ್ಳರು ಪ್ಲಾಸ್ಟಿಕ್‌ ಬಾಕ್ಸ್‌ನಲ್ಲಿದ್ದ ನಗದನ್ನು ಮಾತ್ರ ಕಳ್ಳತನ ಮಾಡಿದ್ದು ವೈನ್‌ ಶಾಪ್‌ನಲ್ಲಿರುವ ಯಾವೊಂದು ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೊಗಿಲ್ಲ. ಆದರೆ ಶಾಪ್‌ನಲ್ಲಿದ್ದ ಸಿ.ಸಿ ಕ್ಯಾಮೆರಾದಲ್ಲಿ ಒಬ್ಬ ಕಳ್ಳ ಮಾತ್ರ ಮೇಲ್ಮಹಡಿಯಿಂದ ಇಳಿದು ಕಳ್ಳತನ ಮಾಡಿರುವುದು ಕಂಡುಬಂದಿದೆ. ಪೊಲೀಸರು ಅತಿ ಶೀಘ್ರದಲ್ಲಿ ಕಳ್ಳರನ್ನು ಪತ್ತೆಹಚ್ಚುವ ವಿಶ್ವಾಸದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next