Advertisement

ಉಡುಪಿ: ಕೆಲಸದ ಸಮಯ ಕರಿಮಣಿ ಸರ ಕಳವು

11:55 PM Jul 07, 2022 | Team Udayavani |

ಉಡುಪಿ: ಕೆಲಸ ನಿರ್ವಹಿಸುತ್ತಿದ್ದ ವೇಳೆ ತೆಗೆದಿರಿಸಿದ್ದ ಕರಿಮಣಿ ಸರವನ್ನು ಕಳವುಗೈಯಲಾದ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾರ್ಕಳದ ಸುಮಲತಾ ಅವರು 6 ತಿಂಗಳಿನಿಂದ ಉಡುಪಿ ಸಂದೀಪ ರೈಯವರ ಕೆಮಿಕಲ್‌ ತಯಾರಿಸುವ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಇವರೊಂದಿಗೆ ಕೆಲಸ ಮಾಡುತ್ತಿರುವ ಪೂರ್ಣಿಮಾ ಅವರು ಕೆಮಿಕಲ್‌ ತಯಾರಿಸಲು ಹೇಳಿದ್ದು, ಕೆಮಿಕಲ್‌ ತಯಾರಿಸುವ ಸಮಯದಲ್ಲಿ ಕರಿಮಣಿ ಸರವನ್ನು ತೆಗೆದಿರಿಸಲು ಹೇಳಿದ್ದರು. ಅದರಂತೆ ಸುಮಲತಾ ಅವರು ಕರಿಮಣಿ ಸರವನ್ನು ಕರವಸ್ತ್ರದಲ್ಲಿ ಕಟ್ಟಿ ಬ್ಯಾಗಿನಲ್ಲಿಟ್ಟು ಕೆಲಸ ಮಾಡುತ್ತಿದ್ದರು.

ಅನಂತರ ಕೆಲಸ ಮುಗಿಸಿ ಸಂಜೆ 6 ಗಂಟೆಗೆ ಬ್ಯಾಗಿನಲ್ಲಿ ನೋಡಿದಾಗ ಬ್ಯಾಗಿನಲ್ಲಿಟ್ಟಿದ್ದ ಕರಿಮಣಿ ಸರ ನಾಪತ್ತೆಯಾಗಿತ್ತು. ಕಳವಾದ ಕರಿಮಣಿ ಸರದ ಮೌಲ್ಯ 1,44,700 ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next