Advertisement

ಗಂಗಾವತಿ: ಮನೆಯ ಬೀಗ ಒಡೆದು ಲಕ್ಷಾಂತರ ರೂ.ಚಿನ್ನ,ನಗದು ಕಳ್ಳತನ

12:33 PM Sep 14, 2022 | Team Udayavani |

ಗಂಗಾವತಿ: ನಗರದ ಆನೆಗೊಂದಿ ರಸ್ತೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಮನೆಯ ಬೀಗ ಒಡೆದು ಮನೆಯ ಅಲ್ಮೇರಾದಲ್ಲಿದ್ದ ಲಕ್ಷಾಂತರ ರೂ.ಚಿನ್ನ ಹಾಗೂ ನಗದು ಹಣವನ್ನು ದೋಚಿದ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.

Advertisement

ಇದನ್ನೂ ಓದಿ: ಹೊಸಪೇಟೆ: ಖಾರದ ಪುಡಿ ಎರಚಿ 6 ಲಕ್ಷ ದೋಚಿದ ಕಳ್ಳರು

ನಗರದ ಆನೆಗೊಂದಿ ರಸ್ತೆಯ ಲಲಿತಮಹಲ್ ಹೋಟೆಲ್ ಎದುರುಗಡೆ ಇರುವ ವರ್ತಕ ಶ್ರೀನಿವಾಸ್ ಎನ್ನುವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದ್ದು, ಮನೆಯವರೆಲ್ಲ ಧರ್ಮಸ್ಥಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಮನೆಯಲ್ಲಿದ್ದ 31 ತೊಲೆ ಚಿನ್ನಾಭರಣ ಹಾಗೂ  10 ಸಾವಿರ ರೂ.ನಗದು ಹಣವನ್ನು ದೋಚಿದ್ದಾರೆ.

ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಸ್ಥಳಕ್ಕೆ ನಗರ ಠಾಣೆಯ ಪಿಐ ಟಿ. ವೆಂಕಟಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಶ್ವಾನದಳ ಆಗಮಿಸಿ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next