Advertisement

ಕೆಮ್ಮಾಯಿ ಮಹಾವಿಷ್ಣು ಮೂರ್ತಿ ದೇವಸ್ಥಾನ ಸೇರಿದಂತೆ ಹತ್ತಿರದ ಎರಡು ಅಂಗಡಿಯಲ್ಲಿ ಕಳ್ಳತನ

09:24 AM Jan 12, 2021 | Team Udayavani |

ಪುತ್ತೂರು: ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಸೇರಿದಂತೆ ಸ್ಥಳೀಯ ಎರಡು ಅಂಗಡಿಗಳಿಂದ ಕಳ್ಳತನ ನಡೆದ ಘಟನೆ ಜ.12 ರಂದು ಬೆಳಕಿಗೆ ಬಂದಿದೆ.

Advertisement

ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಹಿಂಬದಿಯ ಗೋಪುರದಿಂದ ದೇವಳದ ಒಳಾಂಗಣಕ್ಕೆ ಇಳಿದ ಕಳ್ಳರು ದೇವರ ಗರ್ಭಗುಡಿಯ ಬಾಗಿಲು ಮುರಿದು ಒಳನುಗ್ಗಿ ದೇವರ ಬೆಳ್ಳಿಯ ಮಾಲೆಯನ್ನು ಕಳವು ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಉಳಿದಂತೆ ದೇವಳದ ಕಾಣಿಕೆ ಹುಂಡಿಯನ್ನು ತೆರೆದರೂ ಜ.11 ರಂದು ಕಾಣಿಕೆ ಹುಂಡಿ ಲೆಕ್ಕಚಾರ ಆಗಿರುವ ಹಿನ್ನಲೆಯಲ್ಲಿ ಹುಂಡಿಯಿಂದ ಕಳವು ಆಗಿರದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ದೇವಳದ ಎದುರಿನ ಅಂಗಡಿಯಿಂದ ಸಾವಿರಾರೂ ರೂಪಾಯಿ ಕಳವು: ದೇವಳದ ಎದುರಿನ ಅಂಗಡಿಯ ತಿಮ್ಮಪ್ಪ ಗೌಡ ಎಂಬವರ ಅಂಗಡಿಯ ಹಿಂಬದಿಯಿಂದ‌ ಒಳನುಗ್ಗಿದ್ದ ಕಳ್ಳರು ಅಂಗಡಿಯ ಒಳಗೆ ಸ್ವಸಹಾಯ ಸಂಘದ ಸಂಗ್ರಹದ ರೂ.೩೦ ಸಾವಿರ ನಗದು ಮತ್ತು ಇತರ ಚಿಲ್ಲರೆ ಹಣ ಕಳವಾಗಿದೆ.

Advertisement

ಜಂಕ್ಷನ್ ಅಂಗಡಿಯಲ್ಲೂ ಕಳವಿಗೆ ಯತ್ನ: ಕೆಮ್ಮಾಯಿ ಜಂಕ್ಷನ್ ಬಳಿಯ ಲಿಂಗಪ್ಪ ಹಾಗೂ ಬರ್ನಾಂಡಿಸ್ ಎಂಬವರ ಅಂಗಡಿಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ್ದು ಚಿಲ್ಲರೆ ಹಣ ಕಳವಾಗಿದೆ.

ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next