Advertisement

ಕಾರ್ಕಳ: ಬೋಳ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು; ಪಂಚಲೋಹದ ಬಲಿಮೂರ್ತಿ ಕಳವು

02:44 PM Jul 11, 2022 | Team Udayavani |

ಬೆಳ್ಮಣ್: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನಕ್ಕೆ ರವಿವಾರ ರಾತ್ರಿ ಕಳ್ಳರು ನುಗ್ಗಿದ್ದು, ಪಂಚಲೋಹದ ಬಲಿ ಮೂರ್ತಿ ಸೇರಿದಂತೆ ಲಕ್ಷಾಂತರ ರೂ ವಸ್ತಗಳನ್ನು ಕಳವುಗೈದಿದ್ದಾರೆ.

Advertisement

ಸೋಮವಾರ ಬೆಳಗ್ಗೆ ಆರು ಗಂಟೆಗೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ. ದೇವಸ್ಥಾನದ ಹಿಂಬದಿ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಪಂಚಲೋಹದ ಬಲಿಮೂರ್ತಿ ಕಳವು ಮಾಡಿದ್ದಾರೆ. ಅಲ್ಲದೆ ಕಾಣಿಕೆ ಡಬ್ಬಿ ಒಡೆದು ಹಣ ದೋಚಿದ್ದಾರೆ.

ಇದನ್ನೂ ಓದಿ:ನೂತನ ಸಂಸತ್ ಭವನ; 6.5 ಮೀಟರ್ ಎತ್ತರದ ಬೃಹತ್ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಅಲ್ಲದೆ ಲಾಕರ್ ರೂಂ ಪ್ರವೇಶ ಮಾಡಿದ ಕಳ್ಳರು ಲಾಕರ್ ಒಡೆಯಲು ವಿಫಲ ಪ್ರಯತ್ನ ನಡೆಸಿದ್ದಾರೆ. ದೇವಸ್ಥಾನದ ಸಿ.ಸಿ ಕ್ಯಾಮರಾದ ಡಿವಿಆರ್ ನ್ನೇ ಕಳ್ಳರು ಹೊತ್ತೋಯ್ದಿದ್ದಾರೆ.

Advertisement

ಕಾರ್ಕಳ ಗ್ರಾಮಾಂತರ ಪೊಲೀಸರು, ವೃತ್ತ ನಿರೀಕ್ಷಕರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next