Advertisement

Sulya: ಸುಳ್ಯದ ಎರಡು ಅಂಗಡಿಗಳಿಂದ ಕಳವು

12:25 AM Aug 13, 2023 | Team Udayavani |

ಸುಳ್ಯ: ಸುಳ್ಯ ನಗರದ ವಿಷ್ಣು ಸರ್ಕಲ್‌ ಬಳಿ ಇರುವ ಎರಡು ಗೂಡಂಗಡಿಯ ಬಾಗಿಲು ಮುರಿದು ಅಂಗಡಿಯಲ್ಲಿದ್ದ ಸೊತ್ತುಗಳು ಸೇರಿದಂತೆ ನಗದು ಕಳವುಗೈದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ.

Advertisement

ವಿಷ್ಣು ಸರ್ಕಲ್‌ ಬಳಿ ಇರುವ ವೆಂಕಪ್ಪ ಗೌಡ ಅವರ ಅಂಗಡಿ ಮತ್ತು ಮುಂಭಾಗದಲ್ಲಿರುವ ಅವಿಲ್‌ ಮಿಲ್ಕ್ ಹೆಸರಿನ ಗೂಡಂಗಡಿಯಲ್ಲಿ ಕಳ್ಳತನ ನಡೆದಿದೆ. ವೆಂಕಪ್ಪ ಅವರ ಗೂಡಂಗಡಿಯ ಬೀಗ ಮುರಿದು ಅದರೊಳಗಿದ್ದ ಕೆಲವು ವಸ್ತುಗಳು ಸಹಿತ ಡಬ್ಬದಲ್ಲಿದ್ದ ಸುಮಾರು 5 ಸಾವಿರ ರೂ. ನಗದನ್ನು ಕಳವು ಮಾಡಿದ್ದು, ಮುಂಭಾಗದ ಅವಿಲ್‌ ಮಿಲ್ಕ ಅಂಗಡಿಯ ಬಾಗಿಲನ್ನು ಮುರಿದು ಕ್ಯಾಶ್‌ ಡಬ್ಬ ದಲ್ಲಿದ್ದ ಚಿಲ್ಲರೆ ಹಣವನ್ನು ಕಳವುಗೈದಿದ್ದಾರೆ. ಕಳ್ಳತನಕ್ಕೆ ತಂದಿರುವ ಕಬ್ಬಿಣದ ರಾಡನ್ನು ಕಳ್ಳರು ಅಂಗಡಿಯ ಬಳಿಯೇ ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಸುಳ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next